ರೈತನ ಮೊಗದಲ್ಲಿ ಮಂದಹಾಸ ತರಿಸಿದ Sunflower!

ಮಲೆನಾಡಿನಲ್ಲಿ ಬಿಸಿಲನಾಡಿನ ಚೆಲುವೆಯನ್ನ ಅರಳಿಸಿ ಸಕ್ಸಸ್‌ ಕಂಡ ರೈತ

ಬನವಾಸಿ ವ್ಯಾಪ್ತಿಯಲ್ಲಿ ರೈತರೊಬ್ಬರು ಸೂರ್ಯಕಾಂತಿ ಬೆಳೆದು ಕ್ರಾಂತಿ ಮಾಡಿದ್ದಾರೆ

ರೈತ ರಮೇಶ್ ಒಂದು ಎಕರೆ ಹತ್ತು ಗುಂಟೆ ಜಾಗದಲ್ಲಿ ಎರಡು ಕೆಜಿ ಬೀಜದಿಂದ ಹಸನಾಗಿ ಸೂರ್ಯಕಾಂತಿ ಬೆಳೆದಿದ್ದಾರೆ

ರಮೇಶ್ ಅವರಿಗೆ ಬೀಜ, ಗೊಬ್ಬರ ನಿರ್ವಹಣೆ ಎಲ್ಲಾ ಸೇರಿ 15 ಸಾವಿರ ರೂಪಾಯಿಯಷ್ಟು ಖರ್ಚು ಬಂದಿದೆ

ಜಮೀನಿನಲ್ಲಿ ಬಂದ ಇಳುವರಿ ಪ್ರಕಾರ ಆದಾಯ 1 ಲಕ್ಷ ರೂಪಾಯಿಯನ್ನೂ ದಾಟುವ ನಿರೀಕ್ಷೆ ಇದೆ

ಸೂರ್ಯಕಾಂತಿಗೆ ಚೆನ್ನಾಗಿ ನೀರು ಹಾಯಿಸಿದರೆ ಸಾಕು ನಲ್ವತ್ತು ದಿನಗಳಲ್ಲಿ ಸಂಪದ್ಭರಿತ ಬೆಳೆ ಸಿಗುತ್ತೆ

ಕೀಟ, ಪಕ್ಷಿಗಳ ಕಾಟ ಇದ್ರೂ  ಸೂರ್ಯಕಾಂತಿ ಬೆಳೆಯಬಹುದು ಅನ್ನೋದನ್ನ ರಮೇಶ್ತೋರಿಸಿಕೊಟ್ಟಿದ್ದಾರೆ

ಸರ್ಕಾರದ ಯಾವುದೇ ಸಹಾಯವಿಲ್ಲದೆ ರಮೇಶ್ ತಾವೊಬ್ಬರೇ ಏಕಾಂಗಿಯಾಗಿ ಬೆಳೆ ಬೆಳೆದು ಸಾಧಿಸಿ ತೋರಿಸಿದ್ದಾರೆ

ರಮೇಶ್ ಬನವಾಸಿಯಂತಹ ಅರೆ ಮಲೆನಾಡು ಪ್ರದೇಶದಲ್ಲೂ ಸೂರ್ಯಕಾಂತಿ ಬೆಳೆದು ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ