ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು
ಈ ಮಂಗಳಮುಖಿಯರ ವಿಶೇಷ ಕ್ಯಾಂಟೀನ್ಗೆ ಬೇಕು ಜನ ಬೆಂಬಲ.
ಉಡುಪಿಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇವರು ಇಂದು ಸ್ವಂತ ಕ್ಯಾಂಟೀನ್ ಆರಂಭಿಸಿದ್ದಾರೆ.
ಬದಲಾವಣೆಯ ದಾರಿ ಹಿಡಿದ ಮಂಗಳಮುಖಿಯರ ಹೆಸರು ಪೂರ್ವಿ, ಡಿಂಪಲ್, ವೈಷ್ಣವಿ ಮತ್ತು ಚಂದನ ಅಂತ.
ಉಡುಪಿಯ Bus Stand ಪಕ್ಕ ರಾತ್ರಿ 1 ಘಂಟೆಯಿಂದ ಮುಂಜಾನೆ 7ರ ತನಕ ಇವ್ರ ಕ್ಯಾಂಟೀನ್ ತೆರೆದಿರುತ್ತೆ.
ಈ ಮಂಗಳಮುಖಿಯರ ಪುಟ್ಟ ಕ್ಯಾಂಟೀನ್ ಪ್ರಯಾಣಿಕರ ಹಸಿವು ನೀಗಿಸುವ ಆಶ್ರಯತಾಣವಾಗಿದೆ.
ಈ ಮಂಗಳಮುಖಿಯರ ಕ್ಯಾಂಟೀನ್ಗೆ ಉತ್ತಮ ರೆಸ್ಪಾನ್ಸ್ ಸಹ ಸಿಗುತ್ತಿದೆ.
ಉಡುಪಿಯಲ್ಲಿ ಓಪನ್ ಆದ ಈ ಚಿಕ್ಕ ಕ್ಯಾಂಟೀನ್ ಕ್ರಾಂತಿಯ ಗಾಳಿಯನ್ನೇ ಬೀಸಿದೆ.
ಈ ಮಂಗಳಮುಖಿಯರು ಅನೇಕ ಮಂಗಳಮುಖಿಯರಿಗೆ ಸ್ಪೂರ್ತಿಯಾಗಿದ್ದಾರೆ.
ನೀವೂ ಉಡುಪಿಗೆ ಹೋದಾಗ ಇವರ ಕ್ಯಾಂಟೀನ್ ತಿಂಡಿ ತಿನಿಸು ತಿಂದು ಚಹಾ ಹೀರೋಕೆ ಮರೆಯಬೇಡಿ!