HDKಗೆ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡೆಸುತ್ತಿರೋ ಪಂಚರತ್ನ ಯಾತ್ರೆಯಲ್ಲಿ ಹಾರಗಳೇ ಫೇಮಸ್!

ಇತ್ತೀಚಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ಗೂ HDK ಸೇರ್ಪಡೆಗೊಂಡಿದ್ದಾರೆ

ಉತ್ತರ ಕನ್ನಡ ಜಿಲ್ಲೆಯಲ್ಲೂ ಇತ್ತೀಚಿಗೆ ನಡೆದ ಎರಡು ದಿನಗಳ ಯಾತ್ರೆಯಲ್ಲೂ ಹೆಚ್​ಡಿಕೆ ಕೊರಳಿಗೆ ವಿಶೇಷ ಹಾರಗಳು ಬಿದ್ದಿವೆ

ಅದರಲ್ಲೂ ಅಡಿಕೆ ಹಾರ ಎಲ್ಲರ ಗಮನ ಸೆಳೆದಿದೆ

ನಾಲ್ಕೈದು ದಿನಗಳ ಕಾಲ ಶ್ರಮಪಟ್ಟು, ರಾತ್ರಿ- ಹಗಲೆನ್ನದೇ ಈ ಹಾರವನ್ನ ತಯಾರಿಸಲಾಗಿದೆ

ಮಾಜಿ ಸಿಎಂ ಕುಮಾರಸ್ವಾಮಿ ಈ ಹಾರದ ವಿಡಿಯೋ ಟ್ವೀಟ್ ಮಾಡುವ ಮೂಲಕ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಜೆಡಿಎಸ್ ಕಾರ್ಯಕರ್ತ ಅರುಣ್ ಗೌಡಾ ಅವರು ಈ ಹಾರವನ್ನು ತಯಾರಿಸಿದ್ದಾರೆ

ಈ ವಿಶೇಷ ಅಡಿಕೆ ಹಾರವನ್ನ ಉತ್ತರ ಕನ್ನಡದ ಶಿರಸಿಯಲ್ಲೇ ತಯಾರಿಸಲಾಗಿದೆ

ಕುಮಾರಸ್ವಾಮಿಯವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರೇ ಸೇರಿ ಈ ಹಾರವನ್ನ ತಯಾರಿಸಿರುವುದು ಮತ್ತೊಂದು ವಿಶೇಷ