ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಗಟ್ಟಿಗಿತ್ತಿ ವೈದ್ಯೆ
ಡಾ. ಮಹಾಲಕ್ಷ್ಮೀ ಕಾರ್ಲವಾಡ ಅವರೇ ಈ ಗಟ್ಟಿಗಿತ್ತಿ ವೈದ್ಯೆ
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯಾಯ ವೈದ್ಯಶಾಸ್ತ್ರ ವಿಭಾಗದಲ್ಲಿ ಇವರು ಸೇವೆ ಸಲ್ಲಿಸ್ತಿದ್ದಾರೆ
ಬಸವಣ್ಣಪ್ಪ, ಸಂಗಮ್ಮ ದಂಪತಿಯ ಪುತ್ರಿ ಡಾ. ಮಹಾಲಕ್ಷ್ಮೀ ಒಂದರ್ಥದಲ್ಲಿ ದೇವಿ ಸ್ವರೂಪಿಣಿ ಇದ್ದಂತೆ!
ಡಾ. ಮಹಾಲಕ್ಷ್ಮೀ 2020ರಲ್ಲಿ ಕಾರವಾರದ ಕ್ರಿಮ್ಸ್ನಲ್ಲಿ ಹಾಗೂ ಫಾರೆನ್ಸಿಕ್ ಡಿಪಾರ್ಟ್ ಮೆಂಟ್ನ ಸದಸ್ಯರಾಗಿದ್ದರು.
ಇಲ್ಲಿಯವರೆಗೆ ಇವರು ಹಗಲು ರಾತ್ರಿಯೆನ್ನದೇ 100ಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿದ್ದಾರೆ.
ತನ್ನ ತಾಯಿಯನ್ನೆ ಎಲ್ಲಾ ಕೆಲಸಕ್ಕೂ ಸ್ಪೂರ್ತಿಯಾಗಿಸಿಕೊಂಡಿರುವ ಡಾ.ಮಹಾಲಕ್ಷ್ಮೀ
ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪನ್ಯಾಸದ ಮೂಲಕವೂ ನ್ಯಾಯ ವೈದ್ಯಶಾಸ್ತ್ರದ ಕುರಿತು ಅರಿವು ಮೂಡಿಸುತ್ತಾ ಬಂದಿದ್ದಾರೆ.
ಪೋಕ್ಸೋ ಕೇಸ್ನ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆ ನಡೆಸಿ ಹೆಣ್ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಡಾ. ಮಹಾಲಕ್ಷ್ಮೀ ಕಾರ್ಲವಾಡ ಅವರ ಈ ನಿಸ್ವಾರ್ಥ ಸೇವೆಗೆ ಹ್ಯಾಟ್ಸಾಪ್