ಕೊಡಗಿನ ಬಾಡಗ ಗ್ರಾಮದಲ್ಲಿ ಮನುಷ್ಯರ ಮೇಲೆ ಅಟ್ಯಾಕ್ ಮಾಡಿ ಓರ್ವ ಬಾಲಕ ಹಾಗೂ ವೃದ್ಧರ ಸಾವಿಗೆ ಕಾರಣವಾಗಿದ್ದ ಹುಲಿಯನ್ನ ಕೊನೆಗೂ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಬಳಿಯ ನಾಣಚ್ಚಿಗೇಟ್ ಸೆರೆ ಹಿಡಿಯಲಾಗಿದೆ.

ಸತತ ಕಾರ್ಯಾಚರಣೆ ಮೂಲಕ ನೂರಾರು ಸಿಬ್ಬಂದಿಗಳು, ಗಜರಾಜನನ್ನ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದೇ ಹುಲಿರಾಯ ಕೊನೆಗೂ ಶರಣಾಗಿದ್ದಾನೆ.

ಇದಕ್ಕಾಗಿ ಸುಮಾರು 150 ಸಿಬ್ಬಂದಿಗಳು, ಅಭಿಮನ್ಯು ಸೇರಿದಂತೆ ಐದು ಸಾಕಾನೆಗಳ ಸಹಾಯವನ್ನು ಪಡೆಯಲಾಗಿತ್ತು. 

10 ಕ್ಷಿಪ್ರ ಕಾರ್ಯಪಡೆ ವಾಹನ, ರೈಫಲ್ ಸೇರಿದಂತೆ 20 ಬಗೆಯ ಆಯುಧಗಳನ್ನು ಬಳಸಲಾಗಿತ್ತು.

ನಾಣಚ್ಚಿ ಗೇಟ್ ಬಳಿ ಅಡಗಿದ್ದ ಹುಲಿಯನ್ನ ಕಂಡ ಅರಣ್ಯಾಧಿಕಾರಿ ಓರ್ವರು ತಕ್ಷಣವೇ ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದ್ರು

 ಛಲ ಬಿಡದ ಹುಲಿರಾಯ ಓಟಕ್ಕಿತ್ತನಾದರೂ ಬಳಿಕ ಪ್ರಜ್ಞೆ ತಪ್ಪಿ ಅರಣ್ಯ ಸಿಬ್ಬಂದಿಗಳ ಕೈಗೆ ಸಿಗುವಂತಾಯಿತು.

ಇಬ್ಬರ ಸಾವಿನಿಂದ ಕಂಗಾಲಾಗಿದ್ದ ಜನ ಕಾಫಿ ತೋಟದ ಕೆಲಸಕ್ಕೂ ಹೋಗಲು ಭಯಭೀತರಾಗಿದ್ದರು.

ಹುಲಿ ದಾಳಿಯಾಗುತ್ತೋ ಅನ್ನೋ ಭಯ ಆವರಿಸಿಕೊಂಡಿತ್ತು.

ಹುಲಿರಾಯ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕೊಡಗಿನ ಕಾಡಿನಿಂದ ಹೊರ ಬೀಳುವಂತಾಯಿತು

ಕಾರ್ಯಾಚರಣೆ ಮೂಲಕ ಹುಲಿಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.