ಅಯೋಧ್ಯೆಯಂತೆ ಆಗಲಿದೆಯಂತೆ ಅಂಜನಾದ್ರಿ!


ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ದೇವಸ್ಥಾನವೇ ಪವಿತ್ರ ಅಂಜನಾದ್ರಿ ದೇಗುಲ

ಈ ದೇಗುಲವನ್ನೇ ಹನುಮಾನ್ ದೇವರು ಹುಟ್ಟಿದ ದೇವಾಲಯ ಎಂದು ಹೇಳುತ್ತಾರೆ

ಅಂಜನಾದ್ರಿಯನ್ನು ವಿಶ್ವಮಟ್ಟದಲ್ಲಿ ಅಭಿವೃದ್ದಿಪಡಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ

ಬಸವರಾಜ ಬೊಮ್ಮಾಯಿ ಕಳೆದ ವರ್ಷ ಮಂಡಿಸಿದ ಬಜೆಟ್​ನಲ್ಲಿ 100 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದರು

ಕಳೆದಬಾರಿಯಂತರ, ಈ ಬಾರಿ ಬಜೆಟ್​ನಲ್ಲಿ ಮತ್ತೆ ಕೊಪ್ಪಳ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ.

ಕಳೆದ ಬಜೆಟ್​ನಂತೆ ಈ ಬಾರಿಯ ಬಜೆಟ್​ನಲ್ಲಿ ಮತ್ತೆ ಕೊಪ್ಪಳ ವಿವಿ ಆರಂಭಿಸುವುದಾಗಿ ಹೇಳಲಾಗಿದೆ

ಈ ಬಾರಿಯ ಬಜೆಟ್​ನಲ್ಲಿ ಆನೆಗೊಂದಿಯ ಗಗನ ಮಹಲ್ ಅಭಿವೃದ್ದಿ ಹೊರತುಪಡಿಸಿ ಉಳಿದ ಯಾವುದೇ ಘೋಷಣೆಗಳಿಲ್ಲ. 

ಕಳೆದ ಬಾರಿ ಕಿನ್ನಾಳ ಕಲೆ ಜಿಲ್ಲೆಯಲ್ಲಿ ಅಭಿವೃದ್ದಿಗಾಗಿ ಯೋಜನೆ ರೂಪಿಸುವುದಾಗಿ ಹೇಳಲಾಗಿತ್ತು

ಆದರೆ ಈ ಬಾರಿಯ ಬಜೆಟ್​ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ