ನನಗೆ ರಮೇಶ ಜಾರಕಿಹೊಳಿ ಬಗ್ಗೆ ಇನ್ನೂ ಪ್ರೀತಿ ಇದೆ. ಆದರೆ, ಅವರ ಅಳಿಯಂದಿರ ವಿರುದ್ಧ ನಮ್ಮ ಹೋರಾಟವಿದೆ. ನಗರಸಭೆ ಸದಸ್ಯರಾಗಿರುವ ಅಂಬಿರಾವ್ ಜನರನ್ನು ಭಯದ ವಾತಾವರಣದಲ್ಲಿ ಇಟ್ಟಿದ್ದಾರೆ. ನಾನು ಮತ್ತು ರಮೇಶ್ ಜಾರಕಿಹೊಳಿ ರೈಟ್ ಹಾಗೂ ಲೆಫ್ಟ್ ಹ್ಯಾಂಡ್ ರೀತಿ ಇದ್ದೆವು. ಆದರೆ, ಅವರ ಅಳಿಯಂದಿರ ಭ್ರಷ್ಟಾಚಾರ ಮಿತಿಮೀರಿದ್ದರಿಂದ ನಾನು ಸ್ಪರ್ಧಿಸುವ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ ಹೇಳಿದ್ದಾರೆ.