Karnataka Politics Highlights: ಮತದಾನಕ್ಕೆ ನಾನು ವಿಳಂಬ ಮಾಡ್ತಾ ಇದೀನಿ, ಅಡ್ಡಿಪಡಿಸ್ತಾ ಇದೀನಿ ಅಂತ ಯಾರಾದ್ರು ಅಂದುಕೊಂಡರೆ ಅಂತವರ ವಿರುದ್ಧ ನಾನು ಅನುಕಂಪ ವ್ಯಕ್ತಪಡಿಸಬಹುದು ಅಷ್ಟೆ. ಅಂತಹ ಅಗತ್ಯ, ಅಂತಹ ಕಷ್ಟ ನನಗೆ ಬಂದಿಲ್ಲ. ನಾನು ತುಂಬಾ ಸ್ಪಷ್ಟವಾಗಿದ್ದೇನೆ. ಚರ್ಚೆ ಉತ್ತರ ಮತದಾನ ನನ್ನ ಕರ್ತವ್ಯ ಅದನ್ನು ನಾನು ಪಾಲಿಸುತ್ತಿದ್ದೇನೆ. ನನ್ನೊಂದಿಗೆ ಸಹಕರಿಸದೆ ನಿಯಮಗಳನ್ನು ಗಾಳಿಗೆ ತೂರಿ ನಿಮ್ಮ ಅನುಕೂಲಕ್ಕೆ ನಾನಿಲ್ಲಿ ನಡೆದುಕೊಳ್ಳಬೇಕು ಅಂದ್ರೆ ನಾನು ಅದಕ್ಕೆ ಸಿದ್ದನಿಲ್ಲ. ಪಕ್ಷಪಾತ ಮಾಡೋಕೆ ನಾನು ಬಂದಿಲ್ಲ. ನಾನು ಕೊಡುವ ತೀರ್ಪು, ನಾನು ಆಡುವ ಮಾತು ಇತಿಹಾಸದಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ ನಾನು ಇಲ್ಲಿ ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.