ಮಂಡ್ಯದ ಜನ ಇಷ್ಟು ವರ್ಷ ಅಂಬಿಗೆ ಹಂಚಿದ ಅದೇ ಪ್ರೀತಿಯನ್ನು ನನಗೂ ಹಂಚಿದ್ದಾರೆ. ಆಶೀರ್ವದಿಸಿದ್ದಾರೆ ಈ ಚುನಾವಣೆಯಲ್ಲಿನ ಗೆಲುವು ಕೇವಲ ಸಂಭ್ರಮಕ್ಕೆ ಸೀಮಿತವಲ್ಲ, ಬದಲಿಗೆ ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಸ್ವಾಭಿಮಾನದ ಗೆಲುವನ್ನು ಅಂಬಿ ಹುಟ್ಟುಹಬ್ಬದಂದು ನಾನು ಮಂಡ್ಯದ ಜನರ ಜೊತೆ ಆಚರಿಸಲು ಇಚ್ಚಿಸುತ್ತೇನೆ ಎಂದು ನೂತನ ಸಂಸದೆ ಸುಮಲತಾ ಅಂಬರೀಷ್ ತಿಳಿಸಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಅಮರ್ ಚಿತ್ರ ಕುರಿತು ಮಾತನಾಡಿದ ಅವರು, ಈ ಚಿತ್ರ ಅಂಬಿಯ ಕನಸಾಗಿತ್ತು. ಹೀಗಾಗಿ ಈ ಚಿತ್ರ ನೋಡಲು ನಾನು ಕಾತರಳಾಗಿದ್ದೇನೆ ಎಂದಿದ್ದಾರೆ.