ಬೆಂಗಳೂರು(ಮೇ.16): ರಾಜ್ಯದಲ್ಲಿ ಉತ್ತರ ಭಾರತೀಯರ ಕೊಬ್ಬು ದಿನೇದಿನೇ ಮಿತಿ ಮೀರುತ್ತಿದೆ. ಕನ್ನಡಿಗರ ಮೇಲೆ ದರ್ಪ ತೋರುತ್ತಿದ್ದ ಅನ್ಯಭಾಷಿಕರಿಗೆ ಮೈಸೂರಿಗರು ತಕ್ಕಪಾಠ ಕಲಿಸಿದ್ದಾರೆ. ಮೈಸೂರಿನಲ್ಲಿ ಕನ್ನಡಿಗರ ಮೇಲೆ ಉದ್ಧಟತನ ತೋರುತ್ತಿದ್ದ ಉತ್ತರ ಭಾರತೀಯರಿಂದ ಕೈ ಮುಗಿಸಿ ಕ್ಷಮೆ ಕೇಳಿಸಿದ್ದಾರೆ. ಸದ್ಯ ಸ್ಥಳೀಯ ಕನ್ನಡಪರ ಹೋರಾಟಗಾರು ಅನ್ಯಭಾಷಿಕರಿಂದ ಕ್ಷಮಾಪಣೆ ಕೇಳಿಸಿದ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಜತೆಗೆ ಕನ್ನಡಿಗರ ಧೈರ್ಯ ಪ್ರದರ್ಶನಕ್ಕೆ ಅಪರವಾದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.