ನನಗೆ ಪಕ್ಷದ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಅನಿವಾರ್ಯವಾಗಿ ಈ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ. ವಿಶ್ವನಾಥ್ ಒಂದು ವರ್ಷ ಕಾಲ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಲೋಕಸಭೆಯಲ್ಲಿ ಸೋಲಾಯ್ತು. ಸೋಲಿಂದ ನಾವು ಹತಾಶೆ ಆಗಿಲ್ಲ. ದೇವೇಗೌಡರ ಛಲ ನಮ್ಮನ್ನ ಇಲ್ಲಿಗೆ ನಿಲ್ಲಿಸಿದೆ. 1989ರಲ್ಲಿ ಎರಡು ಸ್ಥಾನ ಇದ್ದರೂ ನಂತರ ಪಕ್ಷ ಸಂಘಟನೆ ಮಾಡಿ ಅಧಿಕಾರ ಪಡೆದೆವು. ಸೋಲು ಶಾಶ್ವತ ಅಲ್ಲ. ಎದೆಗುಂದದೆ ಕೆಲಸ ಮಾಡೋಣ. ವಿಶ್ವನಾಥ್ ಆರೋಗ್ಯ ಸರಿ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಬಿಟ್ಟರು. ಅದನ್ನ ನನಗೆ ವಹಿಸಿದ್ದಾರೆ. ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
sangayya
Share Video
ನನಗೆ ಪಕ್ಷದ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಅನಿವಾರ್ಯವಾಗಿ ಈ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ. ವಿಶ್ವನಾಥ್ ಒಂದು ವರ್ಷ ಕಾಲ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಲೋಕಸಭೆಯಲ್ಲಿ ಸೋಲಾಯ್ತು. ಸೋಲಿಂದ ನಾವು ಹತಾಶೆ ಆಗಿಲ್ಲ. ದೇವೇಗೌಡರ ಛಲ ನಮ್ಮನ್ನ ಇಲ್ಲಿಗೆ ನಿಲ್ಲಿಸಿದೆ. 1989ರಲ್ಲಿ ಎರಡು ಸ್ಥಾನ ಇದ್ದರೂ ನಂತರ ಪಕ್ಷ ಸಂಘಟನೆ ಮಾಡಿ ಅಧಿಕಾರ ಪಡೆದೆವು. ಸೋಲು ಶಾಶ್ವತ ಅಲ್ಲ. ಎದೆಗುಂದದೆ ಕೆಲಸ ಮಾಡೋಣ. ವಿಶ್ವನಾಥ್ ಆರೋಗ್ಯ ಸರಿ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಬಿಟ್ಟರು. ಅದನ್ನ ನನಗೆ ವಹಿಸಿದ್ದಾರೆ. ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.