ಹೋಮ್ » ವಿಡಿಯೋ » ರಾಜ್ಯ

ರೈತರ ಸಾಲ ಮನ್ನಾ ಅಸಾಧ್ಯ: ಆರ್ಥಿಕ ಇಲಾಖೆ ಕಾರ್ಯದರ್ಶಿ ಮಾತು ಸ್ಮರಿಸಿದ ಸುಮಲತಾ

ರಾಜ್ಯ17:17 PM April 04, 2019

ಬೆಂಗಳೂರು: ರೈತರ 48 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಅದು ಬರೇ ಭರವಸೆಯಾಗಿಯೇ ಉಳಿಯುತ್ತದೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಇಲಾಖೆ ಕಾರ್ಯದರ್ಶಿ ಹೇಳಿದ ಮಾತುಗಳನ್ನಾಧರಿಸಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಸಾಲ ಮನ್ನಾ ಸಾಧ್ಯವೇ ಎಂದು ಅಂಬರೀಷ್ ಅವರು ಆರ್ಥಿಕ ಇಲಾಖೆ ಕಾರ್ಯದರ್ಶಿಯನ್ನು ಕೇಳಿದಾಗ, ತನ್ನ ನೌಕರರಿಗೆ ಸಂಬಳ ಕೊಡಲು ಸರಕಾರದ ಬಳಿ ದುಡ್ಡಿಲ್ಲ. ರೈತರ 48 ಸಾವಿರ ಕೋಟಿ ಸಾಲ ಮನ್ನಾ ಅಸಾಧ್ಯ. ಈ ವಿಚಾರವನ್ನು ನಿಮ್ಮ ಸ್ನೇಹಿತರಾದ ಮುಖ್ಯಮಂತ್ರಿಗೆ ಹೇಳಿ ಎಂದು ಅವರು ತಿಳಿಸಿದರಂತೆ. ಈ ವಿಚಾರವನ್ನು ಸುಮಲತಾ ಅಂಬರೀಷ್ ಅವರು ಈಗ ಹೊರಗೆಡವಿದ್ದಾರೆ.

sangayya

ಬೆಂಗಳೂರು: ರೈತರ 48 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಅದು ಬರೇ ಭರವಸೆಯಾಗಿಯೇ ಉಳಿಯುತ್ತದೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಇಲಾಖೆ ಕಾರ್ಯದರ್ಶಿ ಹೇಳಿದ ಮಾತುಗಳನ್ನಾಧರಿಸಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಸಾಲ ಮನ್ನಾ ಸಾಧ್ಯವೇ ಎಂದು ಅಂಬರೀಷ್ ಅವರು ಆರ್ಥಿಕ ಇಲಾಖೆ ಕಾರ್ಯದರ್ಶಿಯನ್ನು ಕೇಳಿದಾಗ, ತನ್ನ ನೌಕರರಿಗೆ ಸಂಬಳ ಕೊಡಲು ಸರಕಾರದ ಬಳಿ ದುಡ್ಡಿಲ್ಲ. ರೈತರ 48 ಸಾವಿರ ಕೋಟಿ ಸಾಲ ಮನ್ನಾ ಅಸಾಧ್ಯ. ಈ ವಿಚಾರವನ್ನು ನಿಮ್ಮ ಸ್ನೇಹಿತರಾದ ಮುಖ್ಯಮಂತ್ರಿಗೆ ಹೇಳಿ ಎಂದು ಅವರು ತಿಳಿಸಿದರಂತೆ. ಈ ವಿಚಾರವನ್ನು ಸುಮಲತಾ ಅಂಬರೀಷ್ ಅವರು ಈಗ ಹೊರಗೆಡವಿದ್ದಾರೆ.

ಇತ್ತೀಚಿನದು

Top Stories

//