ಬೆಂಗಳೂರು(ಮಾ.20): ನಮಗೆ ಆಡಳಿತ ನಡೆಸಿ ಸಾಕಾಗಿದೆ, ನೀವು ಮುಂದುವರೆಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಹೇಳಿದ್ದಾರೆ. ಇಂದು ಸದನದಲ್ಲಿ ಬಜೆಟ್ ಮಂಡನೆ ವೇಳೆ ಮಾತಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ಸಿಗರಿಗೆ ಆಡಳಿತ ನಡೆಸಿ ಸಾಕಾಗೋಗಿದೆ. ಇದೀಗ ನಿಮ್ಮ ಸರದಿ, ಆಡಳಿತ ಮುಂದುವರೆಸಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ತಿಳಿಸಿದರು.