ದೆಹಲಿ (ನವೆಂಬರ್ 02); ಈವರೆಗೆ ಮೈತ್ರಿ ಸರ್ಕಾರದ 17 ಶಾಸಕರು ಸ್ವ ಇಚ್ಚೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಬಿಎಸ್ ಯಡಿಯೂರಪ್ಪ ಅವರ ಮಾತಿನ ವಿಡಿಯೋ ನೋಡಿದ ನಂತರ ಶಾಸಕರಿಗೆ ಆಮಿಷ ತೋರಿಸಿಯೇ ಸೆಳೆದಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.