ಬೆಂಗಳೂರು (ಮಾ.12): ನಾನು ಸಂಡೇ ಮಂಡೇ ಲಾಯರ್ ಆಗಿದ್ದೆ. ವಕೀಲ ವೃತ್ತಿಯಲ್ಲಿ ನಾನು ಹೆಚ್ಚು ಕೆಲಸ ಮಾಡಿಲ್ಲ. ಲಾಯರ್ ಆಗಿ ನಾನು ಪೂರ್ಣ ಪ್ರಮಾಣದಲ್ಲಿ ಪ್ರಾಕ್ಟಿಸ್ ಮಾಡಿದ್ದರೆ ಅಲ್ಲೆ ಇರುತ್ತಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ನಾನು ಮಧ್ಯಾಹ್ನದವರೆಗೆ ವಕೀಲಿಕೆ ವೃತ್ತಿ ಮಾಡಿ, ನಂತರ ತಾಲೂಕು ಕಚೇರಿಗೆ ಹೋಗುತ್ತಿದ್ದೆ. ರಾಜಕೀಯ, ವಕೀಲಿಕೆ ಎರಡರಲ್ಲಿಯೂ ತೊಡಗಿಸಿಕೊಂಡಿದ್ದೆ. ರಾಜಕೀಯಕ್ಕಾಗಿ ನಾನು ವಕೀಲ ವೃತ್ತಿ ಬಿಟ್ಟು ಬಂದೆ ಎಂದರು.