ಎಕ್ಸಿಟ್ ಪೋಲ್ ಮೇಲೆ ನನಗೆ ನಂಬಿಕೆ ಇಲ್ಲ. ಇದನ್ನು ನಂಬಿಕೊಂಡು ಹೋದರೆ ಹಾರ್ಟ್ ಅಟ್ಯಾಕ್ ಆಗುತ್ತೆ ಎಂದು ತುಮಕೂರಿನ ಬಿಜೆಪಿ ಅಭ್ಯರ್ಥಿ ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವೇಗೌಡರು ಸೀಮಿತವಾಗಿ ಹಾಸನಕ್ಕೆ ಮಾತ್ರ ಮಣ್ಣಿನ ಮಗ, ತುಮಕೂರಿಗೆ ಅಲ್ಲ, ಅವರನ್ನು ಯಾರೂ ನಂಬಲ್ಲ. ಹೇಮಾವತಿ ನೀರನ್ನು 1975 ರಿಂದ ಇಲ್ಲಿವರೆಗೂ ತುಮಕೂರಿಗೆ ಬಿಟ್ಟಿಲ್ಲ. ಇಡೀ ಕರ್ನಾಟಕದಲ್ಲಿ ಹಠಮಾರಿ ರಾಜಕಾರಣಿ ಅಂದರೆ ದೇವೇಗೌಡರು. ಅವರ ಮಗ ರೇವಣ್ಣ ಕೂಡ ಹಾಗೆಯೇ ಎಂದು ಕಿಡಿಕಾರಿದ್ದಾರೆ.