ಹಾಸನ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವು ಸಾಧಿಸುವುದರಿಂದ ಜೆಡಿಎಸ್ನವರು ಹತಾಶರಾಗಿದ್ದಾರೆ. ಕೆ.ಆರ್. ಪೇಟೆಯಲ್ಲಿ ಚುನಾವಣೆ ನಡೆದರೆ ಹಾಸನದಲ್ಲಿ ಸ್ವಿಚ್ಬೋರ್ಡ್ ಇದೆ. ಈ ಚುನಾವಣೆಯಲ್ಲಿ ಬಿಜೆಪಿಯವರು ಹಣ ಹಂಚಿದ್ದಾರೆ ಎಂದು ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ. ಅವರ ಮಗನ ಚುನಾವಣೆಯಲ್ಲೇನು ಸೊಪ್ಪು ಹಂಚಿದ್ದರಾ? ನಾನು ಕೂಡ ಗೌಡನೇ, ಅವರು ಮಾತ್ರ ಗೌಡರಲ್ಲ ಎಂದು ಬಿಜೆಪಿ ಶಾಸಕ ಪ್ರೀತಮ್ ಗೌಡ ಕಿಡಿಕಾರಿದ್ದಾರೆ.