ಬೃಹತ್ ಮೊತ್ತದ ಕೆಸಿ ವ್ಯಾಲಿ ಯೋಜನೆ ದುರುಪಯೋಗವಾಗುತ್ತಿದೆ, 1050 ಕೋಟಿ ವೆಚ್ಚ ಮಾಡಿದರೂ ನಮ್ಮ ಕ್ಷೇತ್ರ ಶ್ರೀನಿವಾಸಪುರದ ಕೆರೆ ಕಟ್ಟೆ ತುಂಬಿಲ್ಲ, ಕುಡಿಯಲು ನೀರಿಲ್ಲ. ಹಲವರು ತಮಗೆ ಬೇಕಾದಂತೆ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ ಹೀಗಾಗಿ ನನ್ನ ಕ್ಷೇತ್ರದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಸರ್ಕಾರ ಸತ್ತು ಹೋಗಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಕಣ್ಣೀರಿಟ್ಟಿದ್ದಾರೆ.