ಚಿಕ್ಕಮಗಳೂರಿನಲ್ಲೂ ಪ್ರವಾಹದ ಹೊಡೆತಕ್ಕೆ ಬದುಕು ಮೂರಾಬಟ್ಟೆ ಆಗಿದೆ. ಅದ್ರಲ್ಲೂ ಕಳಸಾ ತಾಲೂಕಿನ ಮದುಗುಂಡಿ ಗ್ರಾಮವೇ ಕಣ್ಮರೆ ಆಗಿಬಿಟ್ಟಿದೆ. ರಸ್ತೆಗಳು ಮುಚ್ಚಿ ಹೋಗಿದೆ. ಮನೆಗಳು ಕೊಚ್ಚಿ ಹೋಗಿವೆ. ತೋಟಗಳು ನೀರಲ್ಲಿ ಮಾಯವಾಗಿವೆ ಒಂದೊಂದು ದೃಶ್ಯವೂ ಭಯಾನಕ.. ಅತೀ ಭಯಾನಕವಾಗಿದೆ. ದ್ರೋಣ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಪ್ರವಾಹದ ನಂತರದ ದುಸ್ಥಿತಿಯನ್ನ ನಾವು ತೋರಿಸ್ತಿದ್ದೀವಿ ನೋಡಿ.