ಹೋಮ್ » ವಿಡಿಯೋ » ರಾಜ್ಯ

ಒನ್​ವೇಯಲ್ಲಿ ಬಂದ ಕಾರನ್ನು ಅಡ್ಡಗಟ್ಟಿದ ಕಾನ್​ಸ್ಟೆಬಲ್​ಗೆ ನರಕದರ್ಶನ ಮಾಡಿಸಿದ ಚಾಲಕ

ರಾಜ್ಯ15:26 PM July 27, 2019

ಒನ್​​ವೇಯಲ್ಲಿ ಬರ್ತಿದ್ದ ಪ್ರವಾಸಿ ವಾಹನವನ್ನು ತಡೆಯಲು ಮುಂದಾದ ಕರ್ತವ್ಯ ನಿರತ ಹೋಮ್ ಗಾರ್ಡ್​ಗೆ ಅಪಘಾತ ಪಡಿಸಿ ಕಾರಿನಲ್ಲಿಯೇ ಮಾರು ದೂರ ಹೊತ್ತೊಯ್ದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣದ ಕಡಲತೀರದ ರಸ್ತೆಯಲ್ಲಿ ನಡೆದಿದೆ. ಗೋಕರ್ಣಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ತಮ್ಮ ವಾಹನದಲ್ಲಿ ತೆರಳುವಾಗ ಸಂಚಾರಿ ನಿಯಮ ಉಲ್ಲಂಘಿಸಿ ಹೋಗುತಿದ್ದಾಗ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಹೋಮ್ ಗಾರ್ಡ್ ಚಿದಾನಂದ್ ಎಂಬುವವರು ವಾಹನವನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಪ್ರವಾಸಿ ವಾಹನದ ಚಾಲಕ ಆತನ ಮೇಲೆ ಕಾರನ್ನು ಹರಿಸಲು ಮುಂದಾಗಿದ್ದಾನೆ.

sangayya

ಒನ್​​ವೇಯಲ್ಲಿ ಬರ್ತಿದ್ದ ಪ್ರವಾಸಿ ವಾಹನವನ್ನು ತಡೆಯಲು ಮುಂದಾದ ಕರ್ತವ್ಯ ನಿರತ ಹೋಮ್ ಗಾರ್ಡ್​ಗೆ ಅಪಘಾತ ಪಡಿಸಿ ಕಾರಿನಲ್ಲಿಯೇ ಮಾರು ದೂರ ಹೊತ್ತೊಯ್ದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣದ ಕಡಲತೀರದ ರಸ್ತೆಯಲ್ಲಿ ನಡೆದಿದೆ. ಗೋಕರ್ಣಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ತಮ್ಮ ವಾಹನದಲ್ಲಿ ತೆರಳುವಾಗ ಸಂಚಾರಿ ನಿಯಮ ಉಲ್ಲಂಘಿಸಿ ಹೋಗುತಿದ್ದಾಗ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಹೋಮ್ ಗಾರ್ಡ್ ಚಿದಾನಂದ್ ಎಂಬುವವರು ವಾಹನವನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಪ್ರವಾಸಿ ವಾಹನದ ಚಾಲಕ ಆತನ ಮೇಲೆ ಕಾರನ್ನು ಹರಿಸಲು ಮುಂದಾಗಿದ್ದಾನೆ.

ಇತ್ತೀಚಿನದು

Top Stories

//