ಪೊಲೀಸ್ ಇಲಾಖೆಯಲ್ಲೂ ಆಯುಧ ಪೂಜೆ ಸಂಭ್ರಮ ಜೋರಾಗಿದ್ದು, ಚಾಮುಂಡೇಶ್ವರಿ ದೇವಿಗೆ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಪೂಜೆ ಸಲ್ಲಿಸಿದ್ದಾರೆ. ಮೈಸೂರು ರಸ್ತೆಯ ಸಿಎಆರ್ ಗ್ರೌಂಡ್ ನಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪಿಸಿ ಬಳಿಕ ಬಾಳೆಕಂದು ಕತ್ತರಿಸಿ ಪೂಜೆ ಸಲ್ಲಿಸಿದ್ದಾರೆ. ಆಯುಧ ಪೂಜೆ ಹಿನ್ನಲೆ ಎಲ್ಲಾ ಆಯುಧಗಳು, ಕಾರ್, ಬೈಕ್, ಕೆಎಸ್ಆರ್ಪಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಗನ್ , ಪಿಸ್ತೂಲ್ , ರೈಪಲ್ , ಎಕೆ 47 ವಿವಿಧ ಆಯುಧಕ್ಕೆ ಕಮಿಷನರ್ ಪೂಜೆ ಸಲ್ಲಿಸಿದ್ದಾರೆ.