ಬೆಂಗಳೂರು (ಡಿಸೆಂಬರ್ 21); ಈ ಕುರಿತು ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, “ವಿಪಕ್ಷ ನಾಯಕನ ಸ್ಥಾನ ಎಂದರೇ ಛಾಯಾ ಸಿಎಂ ಇದ್ದಂತೆ. ಆದರೆ, ನನ್ನನ್ನೇ ಮಂಗಳೂರಿಗೆ ತೆರಳದಂತೆ ನಿರ್ಬಂಧಿಸಲಾಗುತ್ತಿದೆ. ನಾವೇನೂ ಮಂಗಳೂರಿಗೆ ಗಲಭೆ ಸೃಷ್ಟಿಸಲು ಹೋಗುತ್ತಿಲ್ಲ, ಬದಲಾಗಿ ಗೋಲಿಬಾರ್ನಲ್ಲಿ ಮೃತಪಟ್ಟ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಹೋಗುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರ ಹೀಗೆ ವಿಪಕ್ಷ ನಾಯಕರ ಮಂಗಳೂರು ಭೇಟಿಗೆ ನಿರ್ಬಂಧ ಹೇರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ” ಎಂದು ಆರೋಪಿಸಿದ್ದಾರೆ.