ಚಿರಂಜೀವಿ ಅಭಿನಯದ ಸೈರಾನರಸಿಂಹ ರೆಡ್ಡಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸೆಟ್ ಈಗ ಬೆಂಕಿಗೆ ಆಹುತಿಯಾಗಿದೆ. ಹೈದರಾಬಾದ್ ಹೊರವಲಯದ ಗಾಂಧಿ ಪೇಟ್ ಕೆರೆ ಪ್ರದೇಶದ ಹತ್ತಿರ ಇದ್ದ ಚಿರಂಜೀವಿ ಅವರ ತೋಟದ ಮನೆಯಲ್ಲಿ ಹಾಕಲಾಗಿದ್ದ ಸೆಟ್ಗೆ ಬೆಂಕಿ ಬಿದ್ದಿದ್ದು, ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ನಡೆದಾಗ ಚಿತ್ರೀಕರಣ ನಡೆಯುತ್ತಿರಲಿಲ್ಲ. ಸದ್ಯ ಈ ಘಟನೆಯಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.