ಹಾಸನ (ಮಾರ್ಚ್ 21): ಯುಗಾದಿ ಹಬ್ಬ ಸಮೀಪಿಸುತ್ತಿದೆ. ಕೊರೊನಾ ರಾಜ್ಯ ಸೇರಿದಂತೆ ದೇಶದೆಲ್ಲೆಡೆ ಅಬ್ಬರಿಸುತ್ತಿದೆ. ಆದರೆ ಯುಗಾದಿ ವೇಳೆ ಮುಂಬೈನಿಂದ 6 ಸಾವಿರ ಮಂದಿ ಹಾಸನ ಜಿಲ್ಲೆಗೆ ಆಗಮಿಸಿಲಿದ್ದಾರೆ. ಯುಗಾದಿ ಹಬ್ಬ ಆಚರಣೆ ಮಾಡಲು 6 ಸಾವಿರ ಮಂದಿ ಬರಲಿದ್ದಾರೆ ಎಂದು ಹಾಸನ ಆರೋಗ್ಯ ಅಧಿಕಾರಿ ನಾಗೇಶ್ ಆರಾಧ್ಯ ಮಾಹಿತಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ವಿವಿಧ ಗ್ರಾಮಗಳ ಜನರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.