Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

ಗಾಯತ್ರಿ ದೇವಿಯ ಉಪಾಸನೆ, ಉಪನಯನ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಸಹ ಈ ಯಕ್ಷಗಾನ ತಾಳಮದ್ದಲೆ ಪ್ರಸಂಗವನ್ನು ಹಮ್ಮಿಕೊಳ್ಳಬಹುದಾಗಿದೆ.

First published:

  • 18

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    ಯಕ್ಷಗಾನ ಅನ್ನೋದು ಮಲೆನಾಡು, ಕರಾವಳಿಯ ಜನರ ಪಾಲಿಗೆ ಬಿಟ್ಟು ಬಿಡಲಾರದ ಹವ್ಯಾಸ. ಒಂದು ಯಕ್ಷಗಾನ  ಪ್ರಸಂಗ ನೋಡಿಬಂದು ತಿಂಗಳಿಡೀ ಅದೇ ಪದವನ್ನು ಗುನುಗುವವರಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    ತಾಯಿ ಗಾಯತ್ರಿ ದೇವಿಯ ಕುರಿತು ಇನ್ನೊಂದು ಯಕ್ಷಗಾನ ಪ್ರಸಂಗವೊಂದು ರಚನೆಯಾಗಿದೆ. ಬಿಸ್ಮಿಲ್ಲಾ ಖಾನ್ ರಾಷ್ಟ್ರೀಯ ಯುವ ಪುರಸ್ಕಾರ ಪಡೆದ ಯಕ್ಷಗಾನ ಭಾಗವತರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅನಂತ ಹೆಗಡೆ ದಂತಳಿಗೆ ಅವರೇ ಈ ಕೃತಿಯ ಸೃಷ್ಟಿಕರ್ತರು.

    MORE
    GALLERIES

  • 38

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    ದೇವುಡು ನರಸಿಂಹ ಶಾಸ್ತ್ರಿಯವರ ಮಹಾ ಬ್ರಾಹ್ಮಣ ಕೃತಿಯನ್ನು ಆಧಾರವಾಗಿಸಿಕೊಂಡು, ಯಕ್ಷಗಾನ ಕಥಾ ಪ್ರಸಂಗ ರಚನೆ ಮಾಡಿರುವುದಾಗಿ ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ ನ್ಯೂಸ್ 18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

    MORE
    GALLERIES

  • 48

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    "ಗಾಯತ್ರೀ ದರ್ಶನ"ವೆಂಬ ಹೊಸ ಯಕ್ಷಗಾನ ಪ್ರಸಂಗ ವಿಶ್ವಾಮಿತ್ರ, ವಸಿಷ್ಠ, ಬೃಹಸ್ಪತಿ, ಸೂರ್ಯದೇವ, ಗಾಯತ್ರಿ ದೇವಿ ಈ ಐದು ಪಾತ್ರಗಳನ್ನು ಒಳಗೊಂಡಿದೆ. ಬಲಿಪ ನಾರಾಯಣ ಭಾಗವತರು ಈ ಮುನ್ನ ಗಾಯತ್ರಿ ಮಹಿಮೆ ಎಂಬ ಪ್ರಸಂಗ ರಚಿಸಿದ್ದಾರೆ.

    MORE
    GALLERIES

  • 58

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    ಗಾಯತ್ರಿ ದೇವಿಯ ಉಪಾಸನೆ, ಉಪನಯನ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಸಹ ಈ ಯಕ್ಷಗಾನ  ಪ್ರಸಂಗವನ್ನು ಹಮ್ಮಿಕೊಳ್ಳಬಹುದಾಗಿದೆ.

    MORE
    GALLERIES

  • 68

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    ಈ ಯಕ್ಷಗಾನ ಪ್ರಸಂಗ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಸಿದ್ಧ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಮೇ 24ರಂದು ಸಂಜೆ 7:30 ರಿಂದ ನಡೆಯಲಿದೆ ಎಂದು ಯಕ್ಷಗಾನ ಭಾಗವತ, ಪ್ರಸಂಗದ ಕರ್ತೃ ಅನಂತ ಹೆಗಡೆ ದಂತಳಿಗೆ ತಿಳಿಸಿದ್ದಾರೆ. 

    MORE
    GALLERIES

  • 78

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    ಈ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮತ್ತು ಅನಂತ ಹೆಗಡೆ ದಂತಳಿಗೆ, ಮೃದಂಗ ವಾದಕರಾಗಿ ಎ.ಪಿ ಪಾಟಕ, ನರಸಿಂಹ ಭಟ್ ಹಂಡ್ರಮನೆ ಇರಲಿದ್ದಾರೆ. ಇನ್ನು ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ವಾಸುದೇವರಂಗಾ ಭಟ್ಟ, ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ, ಡಾ ಮಹೇಶ್ ಭಟ್ಟ ಇಡಗುಂದಿ ಮತ್ತು ವಿದ್ವಾನ್ ವಿನಾಯಕ ಭಟ್ಟ ಇರಲಿದ್ದಾರೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Gayatri Darshana: ಯಕ್ಷಗಾನದಲ್ಲಿ ಗಾಯತ್ರಿ ದರ್ಶನ; ಸೃಷ್ಟಿಯಾಯ್ತು ಹೊಸ ಪ್ರಸಂಗ

    ದೇವುಡು ಅವರ ಅಪಾರ ಶಬ್ದಸಂಪತ್ತನ್ನು ಯಕ್ಷಗಾನ ಪ್ರಸಂಗಕ್ಕಿಳಿಸುವುದು ಸುಲಭವೇನೂ ಆಗಿರಲಿಲ್ಲ. ಹೀಗಾಗಿ ಸುಮಾರು ಐದಾರು ತಿಂಗಳ ಸತತ ಪ್ರಯತ್ನದಿಂದ ಈ ಪ್ರಸಂಗ ರಚನೆಯಾಯಿತು ಎಂದು ಅನಂತ ಹೆಗಡೆ ದಂತಳಿಗೆ ತಿಳಿಸಿದರು. ಆಸಕ್ತರು ಈ ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಬಯಸಿದ್ದಲ್ಲಿ ಅನಂತ ಹೆಗಡೆ ದಂತಳಿಗೆ ಅವರ ಸಂಪರ್ಕ ಸಂಖ್ಯೆ ಹೀಗಿದೆ: 9483069685 (ಸಾಂದರ್ಭಿಕ ಚಿತ್ರ)

    MORE
    GALLERIES