

1.ಅನಾರ್ಕಲಿ ಮತ್ತು ಸಲೀಮ್ : ಇತಿಹಾಸ ಮೊಘಲ್ ರಾಜ ಸಲೀಮ್ ಪ್ರೀತಿಗಾಗಿ ಅಕ್ಬರ್ನೊಂದಿಗೆ ಹೋರಾಡಿ ಮರಣ ಹೊಂದಿದ್ದಾನೆ. ಆದರೆ ಸಲೀಮ್ ಮತ್ತು ಅನಾರ್ಕಲಿಯ ಪ್ರೇಮಕಥೆಯು ಇಂದಿಗೂ ಇತಿಹಾಸದಲ್ಲಿ ಜೀವಂತವಾಗಿ ಉಳಿದಿದೆ.


2.ಪೃಥ್ವಿರಾಜ್ ಚೌಹಾಣ್ ಮತ್ತ ಸಂಯುಕ್ತ : ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿದ ಕಥೆಗಳಲ್ಲಿ ಸಂಯುಕ್ತ ಮತ್ತು ಪೃಥ್ವಿರಾಜ್ ಚೌಹಾನ್ ಕಥೆಯು ಒಂದು. ಇವರಿಬ್ಬರ ಪ್ರೀತಿ ತಂದೆ ಜಯಚಂದ್ ಕಾನೌಜ್ಗೆ ತಿಳಿದು ಸಂಯುಕ್ತಳನ್ನು ಸಯಂವರದ ಮೂಲಕ ಮದುವೆ ಮಾಡಲು ಮುಂದಾಗುತ್ತಾನೆ. ಮದುವೆಗೆ ಏಲ್ಲಾ ರಾಜರುಗಳ ಸಮೇತ ಪೃಥ್ವಿರಾಜ್ ಚೌಹಾನನ್ನು ಆಹ್ವಾನಿಸಲಾಗಿತ್ತು. ಆದರೆ ಚೌಹಾನನ್ನು ಮಾತ್ರ ಅವಮಾನಿಸಲೆಂದು ದ್ವಾರ ಪಾಲಕನಾಗಿ ನೇಮಿಸಿದ್ದರು. ಆದರೆ ಸಂಯುಕ್ತ ತನ್ನ ಹೂವಿನ ಹಾರವನ್ನು ಪೃಥ್ವಿರಾಜ್ ಚೌಹಾನನ ಮೇಲೆ ಹಾಕಿ ಪ್ರೀತಿಯ ಸಾರ್ಥಕತೆ ಮೆರೆದಳು.


3.ನೂರ್ಜಾಹಾನ್ ಮತ್ತು ಜಹಾಂಗೀರ್ : ನೂರ್ಜಾಹಾನ್ ನಿಜವಾದ ಹೆಸರು ಮೆಹರುನ್ನೀಸ. ಮೊಗಲ್ ದೊರೆ ನೂರ್ಜಾಹಾನ್ ಮೆಹರುನ್ನೀಸನ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಮದುವೆಯಾಗುತ್ತಾನೆ. ಜಹಾಂಗೀರ್ 20ನೇ ಮಡದಿಯಾಗಿ ಪ್ರೀತಿಯಿಂದ ನೂರ್ಜಾಹಾನ್ (ವಿಶ್ವದ ಬೆಳಕು) ಎಂದು ಕರೆಯುತ್ತಾನೆ.


4.ಬಪ್ಪಾ ಆದಿತ್ಯ ಮತ್ತು ಸೋಲಾಂಕಿ ರಾಜಕುಮಾರಿ : ಇತಿಹಾಸದದಲ್ಲಿ ಅಜರಾಮರವಾಗಿರುವ ಪ್ರೇಮ ಕಥೆಗಳಲ್ಲಿ ರಜಪೂತ್ ವಂಶದ ರಾಜ ಬಪ್ಪಾ ಆದಿತ್ಯ ಮತ್ತು ಸೋಲಾಂಕಿ ರಾಜಕುಮಾರಿಯ ಕಥೆಯು ಇಂದು ಅನೇಕ ಪ್ರೇಮಿಗಳಿಗೆ ಸ್ಫೂರ್ತಿಯಾಗಿದೆ.


5.ಷಹ ಜಹಾನ್ ಮತ್ತು ಮುಮ್ತಾಜ್ : ಮೊಘಲ್ ರಾಜ ಷಹ ಜಹಾನ್ನ 2ನೇ ಮುದ್ದಿನ ಹೆಂಡತಿ ಹೆಸರು ಮುಮ್ತಾಜ್. ಷಹ ಜಹಾನ್ ಪತ್ನಿ ಮುಮ್ತಾಜ್ ಳಿಗೆ ಪ್ರೇಮ ದ ಸಂಕೇತವಾಗಿ ತಾಜ್ ಮಹಾಲ್ ನಿರ್ಮಿಸಿದ್ದಾರೆ.


6.ಶಿವಾಜಿ ಮತ್ತು ಸಾಯಿಬಾಯಿ : ಮರಾಠ ವಂಶದ ಶಿವಾಜಿ ನಿಂಬಾಲ್ಕರ್ ವಂಶದ ಸಾಯಿಬಾಯಿಯನ್ನು ಮದುವೆಯಾಗುತ್ತಾರೆ. ಅತೀ ಕಡಿಮೆ ವಯಸ್ಸಿನ ಸಾಯಿಬಾಯಿಯನ್ನು ವರಿಸಿದ ಶಿವಾಜಿ ತನ್ನ ಜೀವನದ ಹೆಚ್ಚು ಸಮಯವನ್ನು ಯುದ್ಧದಲ್ಲಿ ಕಳೆದಿದ್ದರು ಆಕೆಯ ಮೇಲಿನ ಪ್ರೀತಿ ಮಾತ್ರ ಮಾಸಿರಲಿಲ್ಲ. ಶಿವಾಜಿ ಸಾಯುವ ಕೊನೆಯ ಸಂದರ್ಭ ‘ಸಾಯಿ‘ ಎಂದು ಉಚ್ಚರಿಸಿ ಕೊನೆ ಉಸಿರೆಳೆಯುತ್ತಾನೆ


7.ಬಾಜಿ ರಾವ್ ಮತ್ತು ಮಸ್ತಾನಿ : ಪೇಶ್ವೆ ವಂಶದ ಬಾಜಿ ರಾವ್ ಪ್ರೀತಿಗೆ ಸೋತು ಹೋಗಿ ಮಸ್ತಾನಿ ಎಂಬ ಹುಡುಗಿಯನ್ನು ಇಷ್ಟಪಡುತ್ತಿದ್ದನು. ಆದರೆ ಬಾಜಿ ರಾವ್ ಮನೆಯವರು ಇವರಿಬ್ಬರ ಪ್ರೀತಿಗೆ ಸಮ್ಮತಿ ನೀಡಲಿಲ್ಲ. ಬಾಜಿ ರಾವ್ ಎಲ್ಲಾ ಸಂಕಷ್ಟವನ್ನು ಎದುರಿಸಿಕೊಂಡು ಮಸ್ತಾನಿಯನ್ನು ಮದುವೆ ಆಗುತ್ತಾನೆ.


8.ಆಮ್ರಾಪಾಲಿ ಮತ್ತು ಬಿಂಬಿಸಾರ : ಮಗಧ ರಾಜ್ಯದ ಬಿಂಬಿಸಾರ ವೈಶಾಲಿ ನಗರವನ್ನು ಯುದ್ಧಮಾಡಿ ವಶಪಡಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಬಿಂಬಿಸಾರನು ವೈಶಾಲಿ ಪ್ರದೇಶದಲ್ಲಿ ನೃತ್ಯ ಮಾಡುತ್ತಿದ್ದ ಅಮ್ರಾಪಾಲಿ ಮೇಲೆ ಪ್ರೀತಿ ಚಿಗುರಿ ಆಕೆಯನ್ನು ಮದುವೆಯಾಗುವಂತೆ ಕೇಳುತ್ತಾನೆ. ಆದರೆ ಆಮ್ರಪಾಲಿ ಪ್ರೀತಿಗಾಗಿ ವೈಶಾಲಿ ನಗರವನ್ನು ಪುನಶ್ಚೇಚತರಿಕೊಡುವಂತೆ ಕೇಳುತ್ತಾಳೆ.