ಭಾರತದ ಮೆಟ್ರೋಪಾಲಿಟನ್ ನಗರಗಳಲ್ಲಿ ಚೆನ್ನೈ ಕೂಡ ಒಂದು. ಅನೇಕ ಪ್ರಸಿದ್ಧ ಸ್ಥಳಗಳಿಗೆ ಭಾರತದಾದ್ಯಂತ ಚೆನ್ನೈ ಹೆಸರುವಾಸಿಯಾಗಿದೆ. ಇಲ್ಲಿ ಭೇಟಿ ನೀಡಲು ದೇಶ ವಿದೇಶಗಳಿಂದ ಜನರು ಮುಗಿಬೀಳುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ, ದಕ್ಷಿಣ ಭಾರತವನ್ನು ರಾಜಕೀಯ ಕೋಟೆ ಎಂದೇ ಹೇಳಬಹುದು. ಆದರೆ ಇಂದು ನಾವು ಚೆನ್ನೈನಲ್ಲಿರುವ ಕೆಲವು ಭಯಾನಕ ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಸ್ಥಳಗಳಿಗೆ ಭೇಟಿ ನೀಡಿದ ಅನೇಕ ಮಂದಿ ಇಂದಿಗೂ ಪತ್ತೆಯಾಗಿಲ್ಲ. ಹಾಗಾಗಿ ರಾತ್ರಿ ಹೊತ್ತು ಒಬ್ಬಂಟಿಯಾಗಿ ಈ ಸ್ಥಳಗಳಿಗೆ ಜನ ಭೇಟಿ ನೀಡಲು ಹೆದರುತ್ತಾರೆ. (image credits facebook)
ಡಿ ಮಾಂಟೆ ಕಾಲೋನಿ: ಚೆನ್ನೈನ ಅತ್ಯಂತ ಭಯಾನಕ ಸ್ಥಳಗಳು ಯಾವುವು ಎಂಬ ಪ್ರಶ್ನೆ ಬಂದಾಗ ಮೊದಲು ಕೇಳಿಬರುವುದೇ ಡಿ ಮಾಂಟೆ ಕಾಲೋನಿ. ಈ ಕಾಲೋನಿಯಲ್ಲಿ ಗಂಡ, ಹೆಂಡತಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಮಹಿಳೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಈ ಘಟನೆ ತುಂಬಾ ಭಯಾನಕವಾಗಿದೆ. ಈ ಘಟನೆಯ ನಂತರ, ಇಡೀ ಊರಿಗೆ ಊರೇ ಖಾಲಿಯಾಯಿತು. (image credits: facebook)
ಕರಿಕಟ್ಕುಪ್ಪಂ: 2004 ರ ಸುನಾಮಿ ನಂತರ, ಚೆನ್ನೈನ ಕರಿಕಟ್ಕುಪ್ಪಂ ಭೂತದ ಸ್ಥಳವೆಂದು ಗುರುತಿಸಲ್ಪಟ್ಟಿದೆ. ಹೌದು, ಕರಿಕಟ್ಕುಪ್ಪಂ ಸುತ್ತಮುತ್ತಲಿನ ಹತ್ತಾರು ಜನರು ಸುನಾಮಿಯಿಂದ ಸಾವನ್ನಪ್ಪಿದ್ದಾರೆ. ಈ ಸುನಾಮಿಯಲ್ಲಿ ಹಲವು ಮನೆಗಳು ಧ್ವಂಸವಾಗಿವೆ. ಕರಿಕಟಕುಪ್ಪೆಯಲ್ಲಿ ನಡೆದ ಈ ಘಟನೆಯಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ. ಸ್ವಲ್ಪ ಸಮಯದ ನಂತರ ಈ ಸ್ಥಳವನ್ನು ಚೆನ್ನೈನಲ್ಲಿರುವ ಭೂತಗಳ ಸ್ಥಳದ ಪಟ್ಟಿಗೆ ಸೇರಿಸಲಾಯಿತು. ಸುನಾಮಿ ಬಳಿಕ ಇಲ್ಲಿ ವಿಚಿತ್ರವಾದ ಧ್ವನಿಗಳು ಬರಲು ಪ್ರಾರಂಭವಾದವು. ಇಂದಿಗೂ, ಸತ್ತವರ ಆತ್ಮಗಳು ಇಲ್ಲಿ ವಾಸವಾಗಿದೆ ಎಂದು ಅನೇಕ ಮಂದಿ ನಂಬಿದ್ದಾರೆ. (Image credits: facebook)
ಮುರಿದ ಸೇತುವೆ: ಚೆನ್ನೈನ ಬಸಂತ್ ನಗರದಲ್ಲಿನ ಮುರಿದ ಸೇತುವೆ ಕೂಡ ದೆವ್ವದ ಸ್ಥಳಗಳಲ್ಲಿ ಒಂದಾಗಿದೆ. ಮೀನುಗಾರರು ನದಿ ದಾಟಲು ನಿರ್ಮಿಸಿದ ಈ ಸೇತುವೆಯ ಬಗ್ಗೆ ಒಂದು ಕಥೆ ಇದೆ. ಒಂದು ಸಂಜೆ ಕೆಲವು ಮೀನುಗಾರರು ಮೀನು ಹಿಡಿಯುತ್ತಿದ್ದಾಗ ಅವರೆಲ್ಲರೂ ಸೇತುವೆಯ ಕೆಳಗೆ ಬಿದ್ದಿದ್ದಾರೆ. ಮತ್ತೊಂದು ಕಥೆ ಎಂದರೆ, ಈ ಘಟನೆಯ ನಂತರ, ಸೇತುವೆಯು ಒಂದು ದಿನ ಹಠಾತ್ತನೆ ಕುಸಿದು ಬಿದ್ದಿದೆ. ಹಾಗಾಗಿ ಈ ಘಟನೆ ಬಳಿಕ ಸೇತುವೆಯನ್ನು ಮತ್ತೆ ನಿರ್ಮಿಸಲಾಗಿಲ್ಲ.(Image credits: facebook)