Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

ಕಾವೇರಿ ನದಿಯ (Cauvery River) ಉಳಿವಿಗಾಗಿ ‘ಕಾವೇರಿ ಕೂಗು’ (Cauvery Calling) ಎಂಬ ಆಂದೋಲನ (Campaign) ಮಾಡಿದ್ದ ಸದ್ಗುರು (Sadhguru) ಜಗ್ಗಿ ವಾಸುದೇವ್ (Jaggi Vasudev) ಈಗಾಗಲೇ ಮತ್ತೊಂದು ಮಹಾ ಕ್ಯಾಂಪೇನ್ ಹಮ್ಮಿಕೊಂಡಿದ್ದಾರೆ. ಮಣ್ಣಿನ ಉಳಿವು ಮತ್ತು ಅದರ ಬಗ್ಗೆ ಸಾವರ್ಜನಿಕರಲ್ಲಿ ಅರಿವು ಮೂಡಿಸಲು ತೀರ್ಮಾನಿಸಿರುವ ಸದ್ಗುರು ಜಗ್ಗಿ ವಾಸುದೇವ್ ಇದಕ್ಕಾಗಿ ವಿಶೇಷ ಬೈಕ್ ರ್ಯಾಲಿ (Bike Rally) ನಡೆಸುತ್ತಿದ್ದಾರೆ. ಇಶಾ (Isha) ಯೋಗ ಕೇಂದ್ರದಲ್ಲಿ ನಡೆದ ಮಹಾಶಿವರಾತ್ರಿ (Maha Shivaratri) ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದ್ಗುರು ಅವರು, ಮಣ್ಣನ್ನು ರಕ್ಷಿಸುವ ಸಲುವಾಗಿ ಬರೋಬ್ಬರಿ 100 ದಿನಗಳ ಬೈಕ್ ರ್ಯಾಲಿ ಬಗ್ಗೆ ಘೋಷಣೆ ನಡೆಸಿದ್ದರು. ಇದೀಗ Save Soil ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ.

First published:

  • 19

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    Save Soil ಮಣ್ಣನ್ನು ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಸದ್ಗುರು ಜಗ್ಗಿ ವಾಸುದೇವ್ ಅವರ ಬೈಕ್ ಅಭಿಯಾನ ಈಗಾಗಲೇ ಆರಂಭವಾಗಿದೆ. ಇದೇ ವರ್ಷದ ಮಾರ್ಚ್ 21ರಂದು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಲಂಡನ್ನಲ್ಲಿ ಸದ್ಗುರು ಅವರ ಬೈಕ್ ಅಭಿಯಾನಕ್ಕೆ ಭರ್ಜರಿ ಚಾಲನೆ ಸಿಕ್ಕಿತು. ಇದಕ್ಕೆ ಕಾಶಿಯಿಂದ ಕನ್ಯಾಕುಮಾರಿವರೆಗೂ ಭರ್ಜರಿ ಬೆಂಬಲ ಸಿಕ್ಕಿದೆ.

    MORE
    GALLERIES

  • 29

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    ವಿಶ್ವ ಭೂ ದಿನವನ್ನು ಆಚರಿಸಲು, ಭಾರತದಾದ್ಯಂತ 80 ಕ್ಕೂ ಹೆಚ್ಚು ನಗರಗಳಿಂದ ಸಾವಿರಾರು ಜನರು ಮಣ್ಣಿನ ಉಳಿಸಿ ಆಂದೋಲನದ ಉಪಕ್ರಮದ ಅಡಿಯಲ್ಲಿ ಒಟ್ಟುಗೂಡಿದರು. 100 ದಿನಗಳ ಕಾಲ ಬರೋಬ್ಬರಿ 30 ಸಾವಿರ ಕಿಲೋ ಮೀಟರ್ ದೂರದ ಬೈಕ್ ಅಭಿಯಾನ ಇದಾಗಿದೆ.

    MORE
    GALLERIES

  • 39

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    ವಿಶ್ವ ಭೂ ದಿನವನ್ನು ಆಚರಿಸಲು, ಇಶಾ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರು ಅವರು ಪ್ರಾರಂಭಿಸಿದ ದಿ ಸೇವ್ ಸೋಲ್ ಆಂದೋಲನದ ಉಪಕ್ರಮದ ಅಡಿಯಲ್ಲಿ ಭಾರತದಾದ್ಯಂತ 80 ಕ್ಕೂ ಹೆಚ್ಚು ನಗರಗಳಿಂದ ಸಾವಿರಾರು ಜನರು ಒಟ್ಟುಗೂಡಿದರು.

    MORE
    GALLERIES

  • 49

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    ವಾರಣಾಸಿಯ ಅಸ್ಸಿ ಘಾಟ್, ಆಗ್ರಾದ ಸಿಕಂದರಾ ಫೋರ್ಟ್, ಗೇಟ್ವೇ ಆಫ್ ಇಂಡಿಯಾ, ಮುಂಬೈನ ಮರೈನ್ ಡ್ರೈವ್, ಗೋವಾದ ಮಿರಾಮಾರ್ ಸರ್ಕಲ್, ಪಾಟ್ನಾದ ಗಂಗಾ ಘಾಟ್, ಹೈದರಾಬಾದ್ನ ನೆಕ್ಲೇಸ್ ರಸ್ತೆ, ಬೆಂಗಳೂರಿನ ಲಾಲ್ ಬಾಗ್ ಮುಂತಾದ ಐಕಾನಿಕ್ ಮತ್ತು ಗದ್ದಲದ ಸ್ಥಳಗಳಲ್ಲಿ ಸ್ವಯಂಸೇವಕರು ಮಣ್ಣು ಉಳಿಸಿ ಫಲಕಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು. , ಚೆನ್ನೈನ ವಿಮಾನ ನಿಲ್ದಾಣ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಬೆಂಬಲ ವ್ಯಕ್ತವಾಯಿತು.

    MORE
    GALLERIES

  • 59

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    100 ದಿನಗಳ ಬೈಕ್‌ ರ‍್ಯಾಲಿ ಯಾವುದೇ ಪ್ರತಿಭಟನೆ ಅಥವಾ ಒತ್ತಡ ಹೇರುವ ತಂತ್ರಗಾರಿಕೆ ಅಲ್ಲ. ಬದಲಾಗಿ ನಾಗರಿಕರ ಇಚ್ಛಾಶಕ್ತಿಯ ಅಭಿವ್ಯಕ್ತಿಯ ಉದ್ದೇಶವಾಗಿದೆ. ಈ ನೂರು ದಿನಗಳ ಬೈಕ್‌ ರ‍್ಯಾಲಿ ಸಂದರ್ಭದಲ್ಲಿ ನಿಮ್ಮಲ್ಲಿರುವ ಪ್ರತಿಯೊಬ್ಬರು ದಿನದಲ್ಲಿ ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಮಣ್ಣಿನ ಬಗ್ಗೆ ಮಾತನಾಡಬೇಕು. ಇಡೀ ವಿಶ್ವವೇ 100 ದಿನಗಳವರೆಗೆ ಮಣ್ಣಿನ ಬಗ್ಗೆ ಮಾತನಾಡಬೇಕೆಂದು ಹೇಳುವ ಮೂಲಕ ಸದ್ಗುರು ಅವರು ʼಮಣ್ಣನ್ನು ಉಳಿಸಿ ಆಂದೋಲನʼವನ್ನು ಆರಂಭಿಸಿದ್ದಾರೆ.

    MORE
    GALLERIES

  • 69

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    ಸದ್ಗುರು ಅವರ ಬೈಕ್ ಅಭಿಯಾನ, ಮಣ್ಣನ್ನು ಉಳಿಸುವಂತೆ ಅವರು ನೀಡಿರುವ ಕರೆ ಹಾಗೂ ಭೂಮಿಯ ಉಳಿವಿನ ಬಗ್ಗೆ ಅವರ ಕಾಳಜಿಯನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದು, ಟ್ವಿಟರ್ನಲ್ಲಿ ಮೀಮ್ಸ್ಗಳು ಅಬ್ಬರಿಸುತ್ತಿವೆ. ಅಭಿಮಾನಿಯೊಬ್ಬರು ರಂಗೋಲಿ ಮೂಲಕವೂ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಅಭಿನಂದಿಸಿದ್ದಾರೆ.

    MORE
    GALLERIES

  • 79

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    ಖ್ಯಾತ ಸಂರಕ್ಷಣಾವಾದಿ ಡಾ. ಜೇನ್ ಗುಡಾಲ್, ದಲೈ ಲಾಮಾ ಮತ್ತು ವಿಶ್ವ ಆರ್ಥಿಕ ವೇದಿಕೆ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಅವರಂತಹ ಜಾಗತಿಕ ನಾಯಕರು ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಮಾರ್ಕ್ ಬೆನಿಯೋಫ್ (ಸೇಲ್ಸ್ಫೋಷ್ರ್), ದೀಪಕ್ ಚೋಪ್ರಾ, ಟೋನಿ ರಾಬಿಸ್ಸ್, ಮ್ಯಾಥ್ಯೂ ಹೇಡನ್, ಕ್ರಿಸ್ ಗೈಲ್, ಜೂಹಿ ಚಾವ್ಲಾ ಮತ್ತು ಸಂಜೀವ್ ಸನ್ಯಾಲ್ರಂತಹ ವಿವಿಧ ಕ್ಷೇತ್ರಗಳ ಪ್ರಮುಖರು ಈ ಚಳುವಳಿಯನ್ನು ಬೆಂಬಲಿಸಿದ್ದಾರೆ.

    MORE
    GALLERIES

  • 89

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    "ಮಣ್ಣನ್ನು ಉಳಿಸುವ ಕಾರ್ಯ ಎಲ್ಲರಿಂದಲೂ ಆಗಬೇಕಿದೆ. ಈಗಾಗಲೇ ಉತ್ತಮ ಮಣ್ಣಿನ ಕೊರತೆ ಇಡೀ ಜಗತ್ತಿಗೆ ಕಾಡುತ್ತಿದೆ. ಅಲ್ಲದೇ ಸದ್ಯ ಇರುವ ಮಣ್ಣು ಕಡಿಮೆಯಾಗುತ್ತ ಬರುತ್ತಿದ್ದು, ಇದನ್ನು ಉಳಿಸಿಕೊಳ್ಳುವ ಅಗತ್ಯತೆಯ ಜೊತೆ ಉತ್ತಮ ಮಣ್ಣಿನ ಸಂರಕ್ಷಣೆ ದಾರಿ ಹುಡುಕಬೇಕಿದೆ. ಹಾಗಾದ್ರೆ ಮಾತ್ರ ಮುಂದಿನ ದಿನಗಳಲ್ಲಿ ಆಹಾರಕ್ಕೆ ಉಂಟಾಗುವ ಸಮಸ್ಯೆಯನ್ನು ತಡೆಗಟ್ಟಬಹುದು" ಎಂದು ಸದ್ಗುರು ಹೇಳಿದ್ದಾರೆ.

    MORE
    GALLERIES

  • 99

    Save Soil: ಸದ್ಗುರುಗಳ 'ಮಣ್ಣು ಉಳಿಸಿ' ಅಭಿಯಾನಕ್ಕೆ ಭಾರೀ ಬೆಂಬಲ, ಕಾಶಿಯಿಂದ ಕನ್ಯಾಕುಮಾರಿವರೆಗೂ ಕೈಜೋಡಿಸಿದ ಜನ

    ಈ ಹಿಂದೆ ಕಾವೇರಿ ಕೂಗು ಅಭಿಯಾನ ನಡೆಸಿದ್ದ ಸದ್ಗುರು ದೊಡ್ಡ ಮಟ್ಟದಲ್ಲಿ ಪರಿಸರ ಪ್ರಿಯರ ಗಮನ ಸೆಳೆದಿದ್ದರು. ನದಿಗಳ ತಪ್ಪಲಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ನದಿ ಪಾತ್ರ ಉಳಿಸುವ ಕಾರ್ಯಕ್ಕೂ ಸದ್ಗುರು ಚಾಲನೆ ನೀಡಿದ್ದರು. ಈಶಾ ಫೌಂಡೇಷನ್ ಮೂಲಕ ಸಮಾಜಮುಖಿಯಾದ ಹಾಗೂ ಪರಿಸರ ಪರವಾದ ಕಾಳಜಿಯ ಅಭಿಯಾನಗಳ ಮೂಲಕ ಗಮನ ಸೆಳೆದಿರುವ ಸದ್ಗುರು, ಆಧ್ಯಾತ್ಮ ಮಾತ್ರವಲ್ಲ ಪರಿಸರ ಪ್ರೇಮವನ್ನೂ ತಮ್ಮ ಅನುಯಾಯಿಗಳಲ್ಲಿ ತುಂಬಲು ಈ ಮೂಲಕ ಶ್ರಮಿಸುತ್ತಿದ್ದಾರೆ.

    MORE
    GALLERIES