ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಮಧ್ಯೆ, ಜೆರೋಧಾ ಸಿಇಒ ನಿತಿನ್ ಕಾಮತ್ ಅವರು ಬುಧವಾರ "ಬೇಗನೆ ತುಂಬಾ ಹಣವನ್ನು ಗಳಿಸಲು ಯಾವುದೇ ರೀತಿಯ ಸುಲಭದ ಮಾರ್ಗವಿಲ್ಲ" ಎಂಬುದನ್ನು ನೆನಪಿನಲ್ಲಿಡುವಂತೆ ಜನರಿಗೆ ಸಲಹೆ ನೀಡಿದರು. ಕಾಮತ್ ಅವರು ವಾಟ್ಸಾಪ್ ನಲ್ಲಿ ಬರುವ ಅರೆಕಾಲಿಕ ಉದ್ಯೋಗದ ಆಫರ್ ಬಲೆಗೆ ಬಿದ್ದು ವಂಚನೆಗೊಳಗಾದ ಮತ್ತು ಹಣವನ್ನು ಕಳೆದುಕೊಂಡ ಅವರಿಗೆ ಪರಿಚಿತವಿರುವವರೊಬ್ಬರ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರು ಹೇಳುವಂತೆ ಇದೆಲ್ಲವೂ ಮೊದಲಿಗೆ ವಾಟ್ಸಾಪ್ ನಲ್ಲಿ ಅರೆಕಾಲಿಕ ಉದ್ಯೋಗ ನೀಡುವುದಾಗಿ ಹಗರಣ ಪ್ರಾರಂಭವಾಯಿತು. "ಮೊದಲಿಗೆ ಮನಬಂದಂತೆ, ಉದಾಹರಣೆಗೆ ಪೆರು ದೇಶದಲ್ಲಿರುವ ರೆಸಾರ್ಟ್ ಒಂದರ ಬಗ್ಗೆ ನಕಲಿಯಾಗಿ ವಿಮರ್ಶೆಗಳನ್ನು ಬರೆಯುವ ಕಾರ್ಯ ನೀಡಲಾಯಿತು . ಹಾಗೆ ಅಲ್ಲಿ ನಕಲಿ ವಿಮರ್ಶೆಗಳನ್ನು ಹಾಕಿದ ಕೆಲಸಕ್ಕಾಗಿ 30 ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು. ಈ ರೀತಿಯ ಕೆಲಸಗಳನ್ನು ಮಾಡುವುದಾಗಿ ಒಪ್ಪಿಕೊಂಡ ಇತರರೊಂದಿಗೆ ಟೆಲಿಗ್ರಾಂ ಗುಂಪನ್ನು ರಚಿಸಲಾಯಿತು” ಎಂದು ಕಾಮತ್ ಹೇಳಿದರು.
"ಆದರೆ ದುರಾಸೆಯಿಂದ ಹೆಚ್ಚಿನ ಹಣವನ್ನು ವರ್ಗಾಯಿಸಲಾಯಿತು, ಬಹುಶಃ ಗ್ರೂಪ್ ನ ಇತರರ ಒತ್ತಡದಿಂದಾಗಿ, ಅವರು ದೊಡ್ಡ ಮೊತ್ತದ ವರ್ಗಾವಣೆ ಮತ್ತು ಲಾಭವನ್ನು ಮಾಡಿದ್ದಾರೆಂದು ಹೇಳಿಕೊಂಡರು" ಎಂದು ಹೇಳಿದರು. ಆಗ ಆ ವ್ಯಕ್ತಿ ಗ್ರೂಪ್ ನಿಂದ ಹೊರಬರಲು ಪ್ರಯತ್ನಿಸಿದನು, ಆದರೆ ಅದು ಸಾಧ್ಯವಾಗಲಿಲ್ಲ ಮತ್ತು ನಿರ್ದಿಷ್ಟ ಸಂಖ್ಯೆಯ ವ್ಯಾಪಾರಿಗಳ ಅಗತ್ಯವಿದೆ ಎಂದು ತಿಳಿಸಲಾಯಿತು.
ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಭಯದಲ್ಲಿ ಆ ವ್ಯಕ್ತಿ ವ್ಯಾಪಾರಕ್ಕೆ ಹೆಚ್ಚಿನ ಹಣವನ್ನು ಸೇರಿಸಿದರು. "ಇದು 5 ಲಕ್ಷ ರೂಪಾಯಿಗಳಾಗಿದ್ದು, ಯಾವುದೇ ವ್ಯಕ್ತಿಗೂ ಇದು ದೊಡ್ಡ ಮೊತ್ತವೇ ಆಗಿರುತ್ತದೆ. ಆ ವ್ಯಕ್ತಿ ಇನ್ನಷ್ಟು ಹಣ ಸೇರಿಸುವುದಕ್ಕೆ ಹಣವಿಲ್ಲ ಅಂತ ಹೇಳಿದ್ದಕ್ಕೆ ಪ್ಲಾಟ್ಫಾರ್ಮ್ ಸಾಲವನ್ನು ಸಹ ನೀಡಿತು. "ವ್ಯಕ್ತಿಯು ಅಂತಿಮವಾಗಿ ಪರಿಸ್ಥಿತಿಯ ಬಗ್ಗೆ ತನ್ನ ಹೆಂಡತಿಗೆ ತಿಳಿಸಲು ನಿರ್ಧರಿಸಿದನು, ಅದು ಸೈಬರ್ ವಂಚನೆ ಎಂದು ಅವರು ತಕ್ಷಣ ಅರಿತುಕೊಂಡರು. ನಂತರ ಸಹಾಯಕ್ಕಾಗಿ ಪೊಲೀಸರನ್ನು ಸಹ ಸಂಪರ್ಕಿಸಿದರು" ಎಂದು ಕಾಮತ್ ಹೇಳಿದರು.