Crime News: 3 ಮಕ್ಕಳ ತಾಯಿಗೆ ಪ್ರಿಯಕರನ ಕಾಟ.. ಹಬ್ಬದ ದಿನ ಸಿಕ್ಕವಳ ಮೇಲೆರಗಿ ರಕ್ತ ಚೆಲ್ಲಾಡಿದ ಪಾಪಿ!

ಯಾದಗಿರಿ: ಮೂವರು ಮಕ್ಕಳ ತಾಯಿಯ ಮೇಲೆ ಆಕೆಯ ಮಾಜಿ ಪ್ರಿಯಕರನೇ ಹಬ್ಬದ ದಿನ ದೇವಸ್ಥಾನದಲ್ಲಿ ಅಟ್ಯಾಕ್ ಮಾಡಿದ್ದಾನೆ. ಬೀಯರ್ ಬಾಟಲ್ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ.

First published:

  • 14

    Crime News: 3 ಮಕ್ಕಳ ತಾಯಿಗೆ ಪ್ರಿಯಕರನ ಕಾಟ.. ಹಬ್ಬದ ದಿನ ಸಿಕ್ಕವಳ ಮೇಲೆರಗಿ ರಕ್ತ ಚೆಲ್ಲಾಡಿದ ಪಾಪಿ!

    ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಗ್ರಾಮದ ಹನುಮಾನ ಮಂದಿರಕ್ಕೆ ಮಗಳೊಂದಿಗೆ ಭೇಟಿ ನೀಡಿದ್ದ ಮಹಿಳೆ ಮೇಲೆ ಪ್ರಿಯಕರ ವೆಂಕಪ್ಪ ದಾಳಿ ಮಾಡಿದ್ದಾನೆ. (Photo: ಆರೋಪಿ ವೆಂಕಪ್ಪ)

    MORE
    GALLERIES

  • 24

    Crime News: 3 ಮಕ್ಕಳ ತಾಯಿಗೆ ಪ್ರಿಯಕರನ ಕಾಟ.. ಹಬ್ಬದ ದಿನ ಸಿಕ್ಕವಳ ಮೇಲೆರಗಿ ರಕ್ತ ಚೆಲ್ಲಾಡಿದ ಪಾಪಿ!

    ಬಿಯರ್ ಬಾಟಲ್ ನಿಂದ ಚುಚ್ಚಿದ್ದ ಪ್ರಿಯಕರ ವೆಂಕಪ್ಪ, ಇನ್ನೇನು ಕಲ್ಲು ಎತ್ತಿ ಹಾಕುವ ವೇಳೆಗೆ ಸುತ್ತಮುತ್ತ ಇದ್ದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗಳು ಚೀರಿಕೊಂಡಿದ್ದರಿಂದ ವೆಂಕಪ್ಪ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    MORE
    GALLERIES

  • 34

    Crime News: 3 ಮಕ್ಕಳ ತಾಯಿಗೆ ಪ್ರಿಯಕರನ ಕಾಟ.. ಹಬ್ಬದ ದಿನ ಸಿಕ್ಕವಳ ಮೇಲೆರಗಿ ರಕ್ತ ಚೆಲ್ಲಾಡಿದ ಪಾಪಿ!

    ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯೊಂದಿಗೆ ಮಹಿಳೆ ಅನೈತಿಕ ಸಂಬಂಧ ಇತ್ತು ಎನ್ನಲಾಗುತ್ತಿದೆ. ಮೂರು ಮಕ್ಕಳಿದ್ದಾರೆ ಇನ್ಮುಂದೆ ಇದೆಲ್ಲಾ ಬೇಡ ಎಂದು ಹೇಳಿ ಮಹಿಳೆ ವೆಂಕಪ್ಪನಿಂದ ದೂರವಾಗಿದ್ದಳು.

    MORE
    GALLERIES

  • 44

    Crime News: 3 ಮಕ್ಕಳ ತಾಯಿಗೆ ಪ್ರಿಯಕರನ ಕಾಟ.. ಹಬ್ಬದ ದಿನ ಸಿಕ್ಕವಳ ಮೇಲೆರಗಿ ರಕ್ತ ಚೆಲ್ಲಾಡಿದ ಪಾಪಿ!

    ಗಂಡ, ಮಕ್ಕಳೊಂದಿಗೆ ಬೆಂಗಳೂರಲ್ಲಿ ನೆಲಸಿದ್ದ ಮಹಿಳೆ ಎಳ್ ಅಮಾವಾಸ್ಯೆ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿದ್ದಳು. ಈ ಸಮಯದಲ್ಲಿ ಮಾಜಿ ಪ್ರಿಯಕರ ಹಣಕ್ಕಾಗಿಯೂ ಒತ್ತಾಯಿಸಿದ್ದಾನೆ. ಇದ್ಯಾವುದಕ್ಕೂ ಒಪ್ಪದಿದ್ದಾಗ, ಕೊಲೆಗೆ ಯತ್ನಿಸಿದ್ದಾನೆ.

    MORE
    GALLERIES