Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?
Karnataka Election 2023: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ಸಿಕ್ಕಿದೆ. ನ್ಯೂಸ್ 18 ಜೊತೆ ಮಾತನಾಡಿರುವ ಸುಮಲತಾ ಅಪ್ತ ಹನಕೆರೆ ಶಶಿಕುಮಾರ್ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಹೊಂದಿರುವ ಸುಮಲತಾ ಅಂಬರೀಶ್, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿದ್ದರು.
2/ 7
ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು, ಶೀಘ್ರದಲ್ಲಿಯೇ ಚುನಾವಣಾ ದಿನಾಂಕಗಳು ಘೋಷಣೆಯಾಗಲಿವೆ. ಈ ಹಿನ್ನೆಲೆ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ.
3/ 7
ರಾಜ್ಯ ರಾಜಕಾರಣ ಪ್ರವೇಶಕ್ಕೆ ಸಂಬಂಧಿಸಿದಂತೆ ಜನವರಿ 31ರಂದು ಸುಮಲತಾ ಅಂಬರೀಶ್ ಬೆಂಬಲಿಗರ ಸಭೆ ನಡೆದಿತ್ತು. ಈ ಸಭೆಯಲ್ಲಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದು ಹನಕೆರೆ ಶಶಿಕುಮಾರ್ ಹೇಳಿದ್ದಾರೆ.
4/ 7
ಬೆಂಬಲಿಗರ ಒತ್ತಾಯಕ್ಕೆ ಮಣಿದಿರುವ ಸುಮಲತಾ ಅಂಬರೀಶ್, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
5/ 7
ಶನಿವಾರ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಮ್ಮ ಕಾರ್ಯಕರ್ತರಿಗೆ ಸುಮಲತಾ ಅವರ ಸಭೆಗಳಿಗೆ ತೆರಳದಂತೆ ಎಚ್ಚರಿಕೆ ನೀಡಿದ್ದರು. ಇದೀಗ ಸಿ.ಡಿ.ಗಂಗಾಧರ್ ಹೇಳಿಕೆಗೆ ಶಶಿಕುಮಾರ್ ತಿರುಗೇಟು ನೀಡಿದ್ದಾರೆ.
6/ 7
ಅಭಿಮಾನಿಗಳನ್ನ ತಡೆಯುವ ಪ್ರಯತ್ನ ಮಾಡಿದ್ರೆ ಕಾಂಗ್ರೆಸ್ ಪತನವಾಗಲಿದೆ. ಅಂಬರೀಶ್ ಸುದೀರ್ಘ 25 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ರು. ಮಂಡ್ಯದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದು ಅಂಬರೀಶ್ ಎಂದು ಶಶಿಕುಮಾರ್ ಹೇಳಿದ್ದಾರೆ.
7/ 7
ಸುಮಲತಾ ವಿರುದ್ಧ ತಿರುಗಿ ನಿಂತರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲಿದೆ. ಕಾಂಗ್ರೆಸ್ಗೆ ಬರಬೇಕಾ ಅಥವಾ ಬೇಡವಾ ಅನ್ನೋದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸುಖಾಸುಮ್ಮನೇ ಗೊಂದಲ ಸೃಷ್ಟಿಸಬೇಡಿ ಎಂದು ಹನಕೆರೆ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
First published:
17
Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?
ಮಂಡ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಹೊಂದಿರುವ ಸುಮಲತಾ ಅಂಬರೀಶ್, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿದ್ದರು.
Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?
ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದ್ದು, ಶೀಘ್ರದಲ್ಲಿಯೇ ಚುನಾವಣಾ ದಿನಾಂಕಗಳು ಘೋಷಣೆಯಾಗಲಿವೆ. ಈ ಹಿನ್ನೆಲೆ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ.
Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?
ರಾಜ್ಯ ರಾಜಕಾರಣ ಪ್ರವೇಶಕ್ಕೆ ಸಂಬಂಧಿಸಿದಂತೆ ಜನವರಿ 31ರಂದು ಸುಮಲತಾ ಅಂಬರೀಶ್ ಬೆಂಬಲಿಗರ ಸಭೆ ನಡೆದಿತ್ತು. ಈ ಸಭೆಯಲ್ಲಿ ರಾಜ್ಯ ರಾಜಕಾರಣಕ್ಕೆ ಸುಮಲತಾ ಬರುವಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದು ಹನಕೆರೆ ಶಶಿಕುಮಾರ್ ಹೇಳಿದ್ದಾರೆ.
Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?
ಶನಿವಾರ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಮ್ಮ ಕಾರ್ಯಕರ್ತರಿಗೆ ಸುಮಲತಾ ಅವರ ಸಭೆಗಳಿಗೆ ತೆರಳದಂತೆ ಎಚ್ಚರಿಕೆ ನೀಡಿದ್ದರು. ಇದೀಗ ಸಿ.ಡಿ.ಗಂಗಾಧರ್ ಹೇಳಿಕೆಗೆ ಶಶಿಕುಮಾರ್ ತಿರುಗೇಟು ನೀಡಿದ್ದಾರೆ.
Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?
ಅಭಿಮಾನಿಗಳನ್ನ ತಡೆಯುವ ಪ್ರಯತ್ನ ಮಾಡಿದ್ರೆ ಕಾಂಗ್ರೆಸ್ ಪತನವಾಗಲಿದೆ. ಅಂಬರೀಶ್ ಸುದೀರ್ಘ 25 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ರು. ಮಂಡ್ಯದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದು ಅಂಬರೀಶ್ ಎಂದು ಶಶಿಕುಮಾರ್ ಹೇಳಿದ್ದಾರೆ.
Sumalatha Ambareesh: ರಾಜ್ಯ ರಾಜ್ಯಕಾರಣಕ್ಕೆ ರೆಬೆಲ್ ಲೇಡಿ ಬರೋದು ಬಹುತೇಕ ಫಿಕ್ಸ್?
ಸುಮಲತಾ ವಿರುದ್ಧ ತಿರುಗಿ ನಿಂತರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲಿದೆ. ಕಾಂಗ್ರೆಸ್ಗೆ ಬರಬೇಕಾ ಅಥವಾ ಬೇಡವಾ ಅನ್ನೋದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸುಖಾಸುಮ್ಮನೇ ಗೊಂದಲ ಸೃಷ್ಟಿಸಬೇಡಿ ಎಂದು ಹನಕೆರೆ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.