Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

Karnataka Elections: ರಾಜ್ಯದಲ್ಲಿ ಚುನಾವಣೆ ಘೋಷಣೆಗೂ ಮುನ್ನ ದೆಹಲಿ ನಾಯಕರು ಕರುನಾಡಿನತ್ತ ಆಗಮಿಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

First published:

  • 17

    Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

    ಇತ್ತ ಕಾಂಗ್ರೆಸ್ ನಾಯಕರು ಸಹ ಪ್ರಜಾಧ್ವನಿ ಹೆಸರಲ್ಲಿ ಯಾತ್ರೆ ನಡೆಸುತ್ತಿದ್ರೆ, ಜೆಡಿಎಸ್ ಪಂಚರಥ ಯಾತ್ರೆ ಮುಂದುವರಿದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

    ಬಿಜೆಪಿ ಮತಗಳ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

    ಮಧ್ಯಾಹ್ನ 2:50ಕ್ಕೆ ಆಗಮಿಸಲಿರುವ ಅಮಿತ್​ ಶಾ ಮೊದಲು  ಪುತ್ತೂರಿನ ಹನುಮಗಿರಿ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

    ಈ ಹಿನ್ನೆಲೆ ಹನುಮಗಿರಿಯ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಬಳಿಕ ಈಶ್ವರ ಮಂಗಲದಿಂದ ಪುತ್ತೂರಿಗೆ ಆಗಮಿಸಿ ಮಧ್ಯಾಹ್ನ 3.40ಕ್ಕೆ  ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

    ಸಂಜೆ 6.00 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಸಿ ಸಂಜೆ 6:15 ರಿಂದ 8:00ರವರೆಗೆ ಏರ್​ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಆಂತರಿಕ ಸಭೆ ನಡೆಸಲಿದ್ದಾರೆ.  ಇಂದು ರಾತ್ರಿ 8:15ಕ್ಕೆ ಮಂಗಳೂರು ಏರ್​ಪೋರ್ಟ್​ನಿಂದ ದೆಹಲಿಗೆ ಅಮಿತ್ ಶಾ ಪ್ರಯಾಣ ಬೆಳೆಸಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

    ಅಮಿತ್​ ಶಾ ಆಗಮನ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪುತ್ತೂರು ಕಾರ್ಯಕ್ರಮಗಳಿಗೆ ಡಿಐಜಿ ಚಂದ್ರಗುಪ್ತ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Amit Shah: ಬಿಜೆಪಿ ಭದ್ರಕೋಟೆಗೆ ಅಮಿತ್ ಶಾ; ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ?

    ಇನ್ನು ಮಂಗಳೂರು ಕಾರ್ಯಕ್ರಮಕ್ಕೆ ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಖಾಕಿ ಭದ್ರತೆ ಏರ್ಪಡಿಸಲಾಗಿದೆ. ಒಟ್ಟು 11 KSRP ತುಕುಡಿ ಸೇರಿ ಹೊರ ಜಿಲ್ಲೆಯ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES