PHOTOS: ಮೈತ್ರಿ ಸರ್ಕಾರದ ಬುನಾದಿಯನ್ನು ಅಲುಗಾಡಿಸಿದ ನಾಯಕರಿವರು
ಆಂತರಿಕ ಒಳಜಗಳ, ಭಿನ್ನಾಭಿಪ್ರಾಯಗಳ ನಡುವೆಯೂ ಒಂದು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆ ಬಳಿಕ ಅಲುಗಾಡಲು ಆರಂಭಿಸಿತು. ಮಂತ್ರಿ ಸ್ಥಾನ ಕೈ ತಪ್ಪಿದಾಗಿನಿಂದ ಸರ್ಕಾರದ ವಿರುದ್ಧ ಬಂಡಾಯ ಘೋಷಿಸಿದ್ದ ರಮೇಶ್ ಜಾರಕಿಹೊಳಿ ಟೀಂ ಸೂಕ್ತ ಸಮಯ ನೀಡಿ ರಾಜೀನಾಮೇ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ 8 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ರಾಮಲಿಂಗಾರೆಡ್ಡಿ ತಂಡ ಕೂಡ ಅತೃಪ್ತಿ ಹೊರ ಹಾಕಿ ಶಾಸಕ ಸ್ಥಾನ ಪದತ್ಯಾಗ ನಡೆಸಿದ್ದಾರೆ. ದಿನಕಳೆದಂತೆ ಶಾಸಕರ ರಾಜೀನಾಮೆ ಸಂಖ್ಯೆ ಹೆಚ್ಚುತ್ತಿದ್ದು, ಮೈತ್ರಿ ಸರ್ಕಾರದ ಸಂಖ್ಯಾಬಲ ಕುಗ್ಗಿದೆ. ಸದ್ಯ ಐಸಿಯು ಸ್ಥಿತಿಯಲ್ಲಿರುವ ಈ ಸರ್ಕಾರಕ್ಕೆ ಶಾಸಕರು ಬೆಂಬಲ ನೀಡುತ್ತಾರಾ ಅಥವಾ ರಾಜೀನಾಮೆ ಪಟ್ಟು ಸಡಿಲಿಸದೇ ಇರುತ್ತಾರಾ ಕಾದು ನೋಡಬೇಕಿದೆ.