ಮೊದಲ ದಿನದ ಸಂಸತ್ ಅಧಿವೇಶನದಲ್ಲಿ ವಿಶೇಷ ಧಿರಿಸಿನ ಮೂಲಕ ಗಮನಸೆಳೆದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ
17ನೇ ಸಂಸತ್ ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯದ ಯುವ ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ವಿಶೇಷ ಧಿರಿಸಿನ ಮೂಲಕ ಗಮನಸೆಳೆದಿದ್ದಾರೆ. ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್ ಸಿಂಹ ಕೊಡವರ ಸಂಪ್ರದಾಯಿಕ ಉಡುಗೆಯಲ್ಲಿ ಕಂಡರೆ, ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಪಂಚೆ ಉಟ್ಟು ಸಂಸತ್ತು ಪ್ರವೇಶಿಸಿದರು.