Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲೂ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ. ಸುಮಾರು 800 ವರ್ಷಕ್ಕೂ ಹಳೆಯ ಇತಿಹಾಸವನ್ನು ಹೊಂದಿರುವ ಕಂಬಳ ಅಪ್ಪಟ ನೆಲದ ಕ್ರೀಡೆ. ನವೆಂಬರ್‌ನಿಂದ ಏಪ್ರಿಲ್‌ತನಕ ನಡೆಯುವ ಈ ಕ್ರೀಡೆ ಪ್ರತೀ ವಾರಾಂತ್ಯ ಶನಿವಾರ ಬೆಳಗ್ಗೆ ಆರಂಭಗೊಂಡು ಭಾನುವಾರ ಸಂಜೆ ತನಕ ನಡೆಯುತ್ತದೆ. ಕೆಲವೊಮ್ಮೆ ಕೋಣಗಳ ಸಂಖ್ಯೆ ಹೆಚ್ಚಾದರೆ ತಡರಾತ್ರಿಯ ತನಕವೂ ಮುಂದುವರಿಯುತ್ತದೆ.

First published:

  • 110

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಅಂದ ಹಾಗೆ ಕಂಬಳ ಕ್ರೀಡೆಯಲ್ಲಿ ಅನೇಕ ವಿಭಾಗಗಳೂ ಇದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ ನೇಗಿಲು ಕಿರಿಯ, ಅಡ್ಡ ಹಲಗೆ, ಕನೆ ಹಲಗೆ, ಸಬ್ ಜ್ಯೂನಿಯರ್ ಹೀಗೆ ಬೇರೆ ಬೇರೆ ವಿಭಾಗದಲ್ಲಿ ಪಂದ್ಯಾಟ ನಡೆಯುತ್ತದೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 210

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಜೊತೆಗೆ ಕಂಬಳದಲ್ಲಿ ವೇಗವಾಗಿ ಗುರಿಯನ್ನು ತಲುಪಿದ ಕೋಣಗಳಿಗೆ ಪ್ರಥಮ, ದ್ವಿತೀಯ ಪ್ರಶಸ್ತಿಗಳು ಹೇಗೆ ಇರುತ್ತದೆಯೋ, ಹಾಗೆಯೇ ಮೇಲ್ಮುಖವಾಗಿ ಆರೂವರೆ ಅಡಿ, ಮತ್ತು ಏಳೂವರೆ ಅಡಿ ಎತ್ತರಕ್ಕೆ ನೀರು ಚಿಮ್ಮಿಸಿದ ಕೋಣಗಳಿಗೂ ಪ್ರಶಸ್ತಿಗಳು ನಿಗದಿ ಮಾಡಲಾಗಿರುತ್ತದೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 310

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ವಿಶೇಷ ಅಂದರೆ ಕಂಬಳಕ್ಕೆ ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರು, ವಯೋವೃದ್ಧರವೆರೆಗೂ ಅಭಿಮಾನಿಗಳಿದ್ದಾರೆ. ನಡು ರಾತ್ರಿಯಲ್ಲೂ ಹೆಣ್ಮಕ್ಕಳು, ವೃದ್ದರು, ಪುರುಷ, ಮಕ್ಕಳೆನ್ನದೆ ಹುರುಪಿನಿಂದ ಕಂಬಳ ವೀಕ್ಷಿಸುತ್ತಾರೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 410

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಕಂಬಳ ಅನ್ನೋದು ಕರಾವಳಿಯಲ್ಲಿ ಪ್ರತಿಷ್ಠೆಯ ಆಟವಾಗಿದ್ದು, ಕಂಬಳದ ಕೋಣದ ಯಜಮಾನರುಗಳಿಗೆ ಊರಿನಲ್ಲಿ ವಿಶೇಷ ಗೌರವವಿದೆ. ಕಂಬಳದ ಕೋಣ ಸಾಕುವವರು ಸಿರಿವಂತರೂ ಆಗಿರುತ್ತಾರೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 510

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಅಚ್ಚರಿಯ ವಿಷಯ ಅಂದ್ರೆ ಕಂಬಳದಲ್ಲಿ ಅತೀ ಹೆಚ್ಚು ಅಭಿಮಾನಿಗಳು ಇರೋದು ಕೋಣಗಳಿಗೆ. ತಾಟೆ, ಕಾಟಿ, ಬೊಲ್ಲೆ, ಚೆನ್ನೆ, ಧೋಣಿ, ಕಾಲೆ, ಪಾಂಡು, ದೂಜೆ, ಮುಕೇಶೆ, ಅಪ್ಪು, ಬೊಟ್ಟಿಮಾರ್‌, ಬಾಬು, ಚಿನ್ನು ಈ ಹೆಸರಿನ ಟಾಪ್‌ ಕೋಣಗಳಿಗೆಲ್ಲ ಹುಚ್ಚು ಅಭಿಮಾನಿಗಳಿದ್ದಾರೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 610

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಕಂಬಳ ವೀಕ್ಷಕ ವಿವರಣೆಗಾರರಿಗೂ ಅಭಿಮಾನಿಗಳಿದ್ದಾರೆ. ಎಡ್ತೂರು ರಾಜೀವ್ ಶೆಟ್ಟಿ, ಗುಣಪಾಲ ಕಡಂಬ ಹೀಗೆ ಪ್ರಮುಖ ಕಾಮೆಂಟರಿ ಹೇಳುವವರು ಪ್ರೇಕ್ಷಕರಿಗೆ, ಕೋಣದ ಯಜಮಾನರುಗಳಿಗೆ ಗದರುವಾಗ, ಆಗಾಗ ಲಘು ಹಾಸ್ಯ ಹೇಳೋವಾಗ ಅದನ್ನ ಕೇಳಲೆಂದೇ ಅಭಿಮಾನಿಗಳು ಇರುತ್ತಾರೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 710

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಕಂಬಳ ಕ್ಷೇತ್ರಕ್ಕೂ ಸರ್ಕಾರ ಮನ್ನಣೆ ನೀಡಿದೆ. 2018ರಲ್ಲಿ ಪ್ರಖ್ಯಾತ ಕಂಬಳ ಓಟಗಾರ, ಕೊಳಕೆ ಎಕ್ಸ್‌ಪ್ರೆಸ್‌ ಖ್ಯಾತಿಯ ಇರ್ವತ್ತೂರು ಆನಂದ ಅವರಿಗೆ 40ಕ್ಕೂ ಹೆಚ್ಚು ವರ್ಷಗಳ ಕಾಲದ ಕಂಬಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕೊಳಕೆ ಆನಂದ ಅವರು ವಾಟ್ಸಾಪ್, ಫೇಸ್‌ಬುಕ್ ಇಲ್ಲದ ಕಾಲದಲ್ಲಿ ಮಿಂಚಿ ಜನಮನ ಗೆದ್ದವರು. ಇತ್ತೀಚೆಗೆ ಕಂಬಳ ಕ್ಷೇತ್ರದ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಮಿಜಾರ್ ಅವರಿಗೂ ಸರ್ಕಾರ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. (ಈ ಚಿತ್ರದಲ್ಲಿ ಇರುವುದು ಕೊಳಕೆ ಇರ್ವತ್ತೂರು ಆನಂದ ಮತ್ತು ಅವರ ಸಹಾಯಕ.) (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 810

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಕಂಬಳದಲ್ಲಿ ಕೋಣಗಳನ್ನು ಬಿಡುವ ಆರಂಭಿಕ ಸ್ಥಳವನ್ನು ‘ಗಂತ್‌’ ಎಂದರೆ, ಕೋಣಗಳು ಓಡಿ ತಲುಪುವ ಜಾಗವನ್ನು ‘ಮಂಜೊಟ್ಟಿ’ ಎನ್ನುತ್ತಾರೆ. ಕಂಬಳದಲ್ಲೇ ಕಂಡು ಬರುವ ಕೆಲವೊಂದು ಅಪರೂಪದ ತುಳು ಶಬ್ದಗಳನ್ನು ನಿತ್ಯ ಜೀವನದಲ್ಲೂ ಬಳಸುವುದಿಲ್ಲ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 910

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಅಚ್ಚರಿಯ ವಿಷಯ ಅಂದ್ರೆ ಕೆಲವೊಮ್ಮೆ ಶನಿವಾರ ಆರಂಭಗೊಂಡ ಕಂಬಳ ಸೋಮವಾರ ಸಂಜೆ ತನಕ ನಡೆದರೆ ಶಾಲಾ ಮಕ್ಕಳು ಕೂಡ ತರಗತಿ ಮುಗಿದ ತಕ್ಷಣ ಕಂಬಳ ನೋಡಲು ಓಡೋಡಿ ಬರುತ್ತಾರೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES

  • 1010

    Kambala: ಕಂಬಳ, ಇದು ಕೇವಲ ಕ್ರೀಡೆಯಲ್ಲ, ಕರಾವಳಿಗರ ಬದುಕು: ಇಲ್ಲಿದೆ ನೀವು ತಿಳಿಯದ 10 ಸಂಗತಿಗಳು

    ಇಷ್ಟೆಲ್ಲ ಇದ್ದರೂ ಕಂಬಳ ಕ್ರೀಡೆಯ ಮೇಲೆ ಕಾನೂನಿನ ತೂಗುಗತ್ತಿ ನೇತಾಡುತ್ತಲೇ ಇದೆ. ಪೇಟಾದವರು ಆಗಾಗ ಆಕ್ಷೇಪಣೆ ತರಲು ಪ್ರಯತ್ನಿಸುತ್ತಿರುವುದು ನಿಜವಾದರೂ, ಇವೆಲ್ಲವನ್ನು ಮೀರಿ ಕಂಬಳವನ್ನು ಉಳಿಸಬೇಕು ಅನ್ನೋದು ಕಂಬಳ ಪ್ರಿಯರ ಮನದ ಮಾತು. (ಫೋಟೋ ಕೃಪೆ: ಪ್ರಣಾಮ್ ಶೆಟ್ಟೆ ಮಿಯಾರ್)

    MORE
    GALLERIES