Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

ಸದನವನ್ನು ನಾಳೆಗೆ ಮುಂದೂಡಿದ ಸ್ಪೀಕರ್ ಆರ್.ವಿ ದೇಶಪಾಂಡೆ ಅವರು, ಇಂದು ಸದನಕ್ಕೆ ಬಾರದೆ ಇರುವ ಶಾಸಕರು ನಾಳೆ ಬಂದು ಪ್ರಮಾಣ ವಚನ ಸ್ವೀಕಾರ ಮಾಡಿ ಎಂದು ಸೂಚನೆ ನೀಡಿದರು.

  • News18 Kannada
  • |
  •   | Bangalore [Bangalore], India
First published:

  • 18

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದ ಮೊದಲ ದಿನ ಅಂತ್ಯವಾಗಿದೆ, ಹಂಗಾಮಿ ಸ್ಪೀಕರ್ ಆರ್​ವಿ ದೇಶಪಾಂಡೆ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಸದನವನ್ನು ಮುಂದೂಡಿದ್ದಾರೆ.

    MORE
    GALLERIES

  • 28

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಮೊದಲ ದಿನ ಸಿಎಂ, ಡಿಸಿಎಂ ಸೇರಿದಂತೆ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ ಪ್ರಮಾಣ ವಚನ ಬೋಧಿಸಿದರು. ಈ ನಡುವೆ ಸದನದೊಳಗೆ ಕೆಲ ಶಾಸಕರು ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದರು.

    MORE
    GALLERIES

  • 38

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಪ್ರಮಾಣವಚನಕ್ಕೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಫುಲ್ ಆ್ಯಕ್ಟೀವ್ ಆಗಿದ್ದರು. ಬಿಜೆಪಿ ನಾಯಕರ ಜೊತೆ ಕೆಲ ಹೊತ್ತು ಮಾತನಾಡಿದ ಡಿಕೆಶಿ, ಮಾಜಿ ಸಚಿವ ಆಶೋಕ್ ಹಾಗೂ ಮಾಜಿ ಸಿಎಂ ಬೊಮ್ಮಾಯಿ ಜೊತೆ ಫೋಟೋ ತೆಗೆಸಿಕೊಂಡರು. ಅಶೋಕ್ ಬೇಡ ಅಂದರೂ ಬಾರಪ್ಪ ಎಂದು ಹೆಗಲಿನ ಮೇಲೆ ಕೈ ಹಾಕಿ ಡಿಕೆಶಿ ಫೋಟೋ ತೆಗೆಸಿಕೊಂಡಿದ್ದಾರೆ.

    MORE
    GALLERIES

  • 48

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಅಶೋಕ್ ಮಾತ್ರವಲ್ಲದೇ, ಡಿಕೆ ಶಿವಕುಮಾರ್​, ಬಿಜೆಪಿ ನಾಯಕರಾದ ಬೊಮ್ಮಾಯಿ, ಅಶೋಕ್, ಆರಗ ಜ್ಞಾನೇಂದ್ರ ಜೊತೆ ಫೋಟೋ ಶೋಟ್ ಮಾಡಿಸಿಕೊಂಡರು. ಕೈ ಕೈನ ಕುಲುಕಿ ನಕ್ಕು ಮಾತಾಡಿಸಿದರು.

    MORE
    GALLERIES

  • 58

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಸೆಷನ್​ನಲ್ಲಿ ಜನಾರ್ದನ ರೆಡ್ಡಿ ಕೂಡಾ ಗಮನ ಸೆಳೆದರು. ಜನಾರ್ದನ ರೆಡ್ಡಿ ಭಗವಂತ ಹಾಗೂ ಗಂಗಾವತಿಯ ಅಂಜನಾದ್ರಿ ಹನುಮಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಜನಾರ್ದನ ರೆಡ್ಡಿ ಅವರು, 12 ವರ್ಷದ ನಂತರ ಮತ್ತೆ ವಿಧಾನಸೌಧಕ್ಕೆ ಹೆಜ್ಜೆ ಇಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಸಾಕಷ್ಟು ಆಶೀರ್ವಾದ ಮಾಡಿದರೂ, ನಾನು ಗೆದ್ದು ವಿಧಾನಸೌಧ ಪ್ರವೇಶ ಮಾಡಿದ್ದೇನೆ. ಕರ್ನಾಟಕದ ಜನರ ಒಳಿತಿಗಾಗಿ ಕಲ್ಯಾಣ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    MORE
    GALLERIES

  • 68

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಇನ್ನು, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಡಿಕೆ ಶಿವಕುಮಾರ್ ಹೆಸರೇಳಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವ್ಯಕ್ತಿ ಹಾಗೂ ದೇವರ ಹೆಸರು ಬಳಕೆ ಮಾಡಿ ಪ್ರತಿಜ್ಞಾ ವಿಧಿಸ್ವೀಕಾರ ಮಾಡಿದ್ದಾರೆ. ಯಾರೂ ವೈಯಕ್ತಿಕ ಹೆಸರು ತೆಗೆದುಕೊಳ್ಳುವುದು ಬೇಡ ಅಂತಾ ಹಂಗಾಮಿ ಸ್ಪೀಕರ್ ಸೂಚನೆ ನೀಡಿದ್ದರು. ಆದರೂ ಈ ಇಬ್ಬರು ಶಾಸಕರು ಎಡವಟ್ಟು ಮಾಡಿದ್ದರು. ಬಳಿಕ ಭಗವಂತನ ಹೆಸರು ಅಥವಾ ಸಂವಿಧಾನ ಪ್ರಕಾರ ಅಂತ ಪದ ಬಳಸಿ ಅಂತ ಸಲಹೆ ನೀಡಿದರು.

    MORE
    GALLERIES

  • 78

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಇತ್ತ ಇಂಗ್ಲೀಷ್​ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ವಿವಾದಕ್ಕೆ ಕಾರಣವಾಗಿದ್ದ ಶಾಸಕ ಜಮೀರ್ ಅಹ್ಮದ್ ಅವರು ಇಂದು ಸ್ಪೀಕರ್ ಕಚೇರಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಕನ್ನಡ ಬಾರದ ಹಿನ್ನೆಲೆಯಲ್ಲಿ ಜಮೀರ್ ಅವರು ಸ್ಪೀಕರ್ ಕಚೇರಿಯಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 88

    Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ

    ಸದನವನ್ನು ನಾಳೆಗೆ ಮುಂದೂಡಿದ ಸ್ಪೀಕರ್ ಆರ್.ವಿ ದೇಶಪಾಂಡೆ ಅವರು, ಇಂದು ಸದನಕ್ಕೆ ಬಾರದೆ ಇರುವ ಶಾಸಕರು ನಾಳೆ ಬಂದು ಪ್ರಮಾಣ ವಚನ ಸ್ವೀಕಾರ ಮಾಡಿ ಎಂದು ಸೂಚನೆ ನೀಡಿದರು. ಇಂದು 182 ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

    MORE
    GALLERIES