Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

ನಾಡಿನ ಖ್ಯಾತ ನೇತ್ರ ತಜ್ಞರಾಗಿದ್ದ ಡಾ. ಭುಜಂಗ ಶೆಟ್ಟಿ ನಿಧನರಾಗಿದ್ದಾರೆ. ತಮ್ಮ ಚಿಕಿತ್ಸೆ ಮೂಲಕ ಅಸಂಖ್ಯಾತ ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗಶೆಟ್ಟಿ ಇಂದು ಕರ್ತವ್ಯ ಮುಗಿಸಿ, ಮನೆಗೆ ತೆರಳಿದವರೇ ಕೊನೆಯುಸಿರೆಳೆದಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

    ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಾ. ಭುಜಂಗ ಶೆಟ್ಟಿ ಅವರಿಗೆ 69 ವರ್ಷ ವಯಸ್ಸಾಗಿತ್ತು.

    MORE
    GALLERIES

  • 27

    Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

    ಡಾ. ಭುಜಂಗ ಶೆಟ್ಟಿ ಎಂದಿನಂತೆ ಇಂದೂ ಸಹ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಮನೆಗೆ ತೆರಳಿದ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.

    MORE
    GALLERIES

  • 37

    Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

    ಹೃದಯಾಘಾತವಾಗುತ್ತಿದ್ದಂತೆ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆತರಲಾಗಿದೆ. ಆಸ್ಪತ್ರೆಗೆ ಕರೆತಂದರೂ ಡಾ. ಭುಜಂಗ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ.

    MORE
    GALLERIES

  • 47

    Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

    ಸಂಜೆ ಮನೆಗೆ ಹೋಗಿ ಮನೆಯಲ್ಲಿ ಜಿಮ್ ನಲ್ಲಿ ವ್ಯಾಯಾಮ ಮಾಡಿದ್ದರು ಎನ್ನಲಾಗಿದೆ. ಬಳಿಕ ಎದೆನೋವು ಕಾಣಿಸಿಕೊಂಡಿದೆ. ತೀವ್ರ ಹೃದಯಾಘಾತವಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಕರೆತರುವ ವೇಳೆ ಹೃದಯ ಬಡಿತ ನಿಂತು ಹೋಗಿತ್ತು ಎನ್ನಲಾಗಿದೆ. ಆಸ್ಪತ್ರೆಗಯಲ್ಲಿ CPR ಮಾಡಿದ್ರು ಪ್ರಯೋಜನವಾಗಲಿಲ್ಲ.

    MORE
    GALLERIES

  • 57

    Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

    ಭುಜಂಗ ಶೆಟ್ಟಿ ಅವರು 1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ್ರು. ಬಳಿಕ 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ಅಧ್ಯಯನ. ಬಳಿಕ ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್ನಲ್ಲಿ ನೇತ್ರ ಪರೀಕ್ಷೆ ಆರಂಭಿಸಿದರು.

    MORE
    GALLERIES

  • 67

    Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

    ಅಕ್ಟೋಬರ್ 1993 ರಲ್ಲಿ ನಾರಾಯಣ ನೇತ್ರಾಲಯ ದೊಡ್ಡದಾಗಿ ಪ್ರಾರಂಭವಾಯಿತು. ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದಾರೆ.

    MORE
    GALLERIES

  • 77

    Dr Bhujang Shetty: ಖ್ಯಾತ ನೇತ್ರತಜ್ಞ ಡಾ ಭುಜಂಗ ಶೆಟ್ಟಿ ನಿಧನ, ಹೃದಯಾಘಾತದಿಂದ ಕೊನೆಯುಸಿರು

    ಅಂದಹಾಗೆ ಡಾ. ರಾಜ್ಕುಮಾರ್ ಅವರ ಕಣ್ಣು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ. ನಟ ಪುನೀತ್ ರಾಜ್ಕುಮಾರ್ ಅವರ ಕಣ್ಣನ್ನೂ ಕೂಡ ಇದೇ ಆಸ್ಪತ್ರೆಗೆ ನೀಡಲಾಗಿದೆ. ಡಾ. ಭುಜಂಗ ಶೆಟ್ಟಿ ಅಸಂಖ್ಯಾತ ಅಂಧರಿಗೆ ತಮ್ಮ ಚಿಕಿತ್ಸೆ ಮೂಲಕ ಹೊಸ ದಷ್ಟಿ ನೀಡಿದ್ದಾರೆ.

    MORE
    GALLERIES