ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಒಟ್ಟು 6 ವರ್ಣರಂಜಿತ ಸ್ತಬ್ಧಚಿತ್ರಗಳು ಎಲ್ಲರನ್ನೂ ಆಕರ್ಷಿಸಿದವು. 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 'ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ' ಸ್ತಬ್ದಚಿತ್ರವು ಮೊದಲಿಗೆ ಸಾಗುವ ಮೂಲಕ ಎಲ್ಲರ ಚಿತ್ತ ನೆಟ್ಟಿತು. ಬಳಿಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 'ಬಹುವಸತಿ ಸಂಕೀರ್ಣ', ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 'ಕೊರೊನಾ ಮುಕ್ತ ಕರ್ನಾಟಕ' ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ 'ಸಮಗ್ರ ಕೃಷಿ', ಮತ್ತು ದಸರಾ ಉಪಸಮಿತಿಯಿಂದ 'ಪರಿಸರ ಸಂರಕ್ಷಣೆ', 'ಅರಮನೆ ಆನೆಬಂಡಿ' ಸ್ತಬ್ಧ ಚಿತ್ರಗಳು ಸಾಗಿದವು.