Bengaluru Rains: ಇಂದು ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ

ನಿನ್ನೆ ಕೋಲಾರ ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿ, ಆಲಿಕಲ್ಲು ಸಹಿತ ಮಳೆಗೆ ಕೋಲಾರ ಜಿಲ್ಲೆಯಾದ್ಯಂತ ಅಂದಾಜು 20 ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಅಂದಾಜು 3,200 ಹೆಕ್ಟೇರ್​​ಗೂ ಹೆಚ್ಚು ಪ್ರದೇಶದಲ್ಲಿ ಬೆಳೆನಾಶ ಆಗಿದೆ. ಇದರಲ್ಲಿ 2,900 ಹೆಕ್ಟೇರ್ ಪ್ರದೇಶದಷ್ಟು ಮಾವು, 300 ಹೆಕ್ಟೇರ್ ನಷ್ಟು ಟೊಮೆಟೊ, ಹಿಪ್ಪು ನೇರಳೆ, ಹೂ ಕೋಸು ಬೆಳೆಹಾನಿಯಾಗಿದೆ.

First published:

  • 16

    Bengaluru Rains: ಇಂದು ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಂದು ಆನೇಕಲ್, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದೆ. ಸತತ ಎರಡನೇ ದಿನವೂ ಸಂಜೆ ವೇಳೆಗೆ ಬೆಂಗಳೂರಿನ ಕೋರಮಂಗಲ, ಕೆಂಗೇರಿ, ಆಡುಗೋಡಿ, ವಿಲ್ಸನ್ ಗಾರ್ಡನ್, ಬನಶಂಕರಿ, ಲಾಲ್​​​ಬಾಗ್​​, ಕುಮಾರಸ್ವಾಮಿ ಲೇಔಟ್​​, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಕೆಆರ್ ಮಾರ್ಕೆಟ್, ಶ್ರೀನಗರ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದ ಸಾರ್ವಜನಿಕರು ಮಳೆಯಿಂದ ಸಮಸ್ಯೆ ಎದುರಿಸಿದ್ದಾರೆ.

    MORE
    GALLERIES

  • 26

    Bengaluru Rains: ಇಂದು ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ

    ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ, ಅತ್ತಿಬೆಲೆ ಚಂದಾಪುರ ಸೇರಿದಂತೆ ಬನ್ನೇರುಘಟ್ಟ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಗೆ ವಾಹನ ಸವಾರರು, ಪಾದಚಾರಿಗಳ ಕೆಲ ಸಮಯ ಪರದಾಟ ನಡೆಸಿದರು.

    MORE
    GALLERIES

  • 36

    Bengaluru Rains: ಇಂದು ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ

    ಕೋಲಾರ ಜಿಲ್ಲೆಯಾದ್ಯಂತ ಇಂದು ಕೂಡ ಭಾರೀ ಗಾಳಿಯೊಂದಿಗೆ ಗುಡುಗು ಮಿಂಚು ಸಹಿತ, ಸುಮಾರು ಒಂದು ಗಂಟೆ ಸಮಯ ಕಾಲ ಮಳೆಯಾಗಿದೆ. ನಿನ್ನೆ ಆಲಿಕಲ್ಲು ಸುರಿದು ಭಾರೀ ನಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ಮಾವು ಬೆಳೆಗಾರರು ಹಾಗೂ ರೈತರು ಮತ್ತಷ್ಟು ನಷ್ಟ ಎದುರಿಸುವ ಆತಂಕದಲ್ಲಿದ್ದಾರೆ.

    MORE
    GALLERIES

  • 46

    Bengaluru Rains: ಇಂದು ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ

    ಇನ್ನು, ನಿನ್ನೆ ಕೋಲಾರ ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿ, ಆಲಿಕಲ್ಲು ಸಹಿತ ಮಳೆಗೆ ಕೋಲಾರ ಜಿಲ್ಲೆಯಾದ್ಯಂತ ಅಂದಾಜು 20 ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಅಂದಾಜು 3,200 ಹೆಕ್ಟೇರ್​​ಗೂ ಹೆಚ್ಚು ಪ್ರದೇಶದಲ್ಲಿ ಬೆಳೆನಾಶ ಆಗಿದೆ. ಇದರಲ್ಲಿ 2,900 ಹೆಕ್ಟೇರ್ ಪ್ರದೇಶದಷ್ಟು ಮಾವು, 300 ಹೆಕ್ಟೇರ್ ನಷ್ಟು ಟೊಮೆಟೊ, ಹಿಪ್ಪು ನೇರಳೆ, ಹೂ ಕೋಸು ಬೆಳೆಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕುಮಾರಸ್ವಾಮಿ ಮಾಹಿತಿ ನೀಡಿದ್ದರೆ.

    MORE
    GALLERIES

  • 56

    Bengaluru Rains: ಇಂದು ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ

    ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆನಾಶ ಹಿನ್ನಲೆಯಲ್ಲಿ ರೈತರಿಗೆ ಪರಿಹಾರ ನೀಡುವಂತೆ ಶ್ರೀನಿವಾಸಪುರ ಶಾಸಕ, ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಬೆಳೆಹಾನಿ ವೈಜ್ಞಾನಿಕ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇನ್ನು ಮಳೆಯಿಂದ ಹಾನಿಗೊಳಗಾದ ರೈತರ ತೋಟಗಳಿಗೆ ಶಾಸಕ ರಮೇಶ್​​ ಕುಮಾರ್​ ಭೇಟಿ ನೀಡಿ ಬೆಳೆನಾಶ ವೀಕ್ಷಣೆ ಮಾಡಿದರು. ಅಲ್ಲದೆ, ಸೂಕ್ತ ಪರಿಹಾರ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದರು.

    MORE
    GALLERIES

  • 66

    Bengaluru Rains: ಇಂದು ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ; ಆಲಿಕಲ್ಲು ಮಳೆಗೆ ಕೋಲಾರದಲ್ಲಿ 20 ಕೋಟಿ ಮೌಲ್ಯದ ಬೆಳೆ ನಾಶ

    ವಿಜಯಪುರ ಜಿಲ್ಲೆಯಲ್ಲೂ ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ನೆಲ ಕಚ್ಚಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡಲು ಕರ್ನಾಟಕ ದ್ರಾಕ್ಷಿ ಮತ್ತು ವೈನ್​ ಬೋರ್ಡ್​​ ಅಧ್ಯಕ್ಷ ಎಂಎಸ್​​ ರುದ್ರಾಗೌಡ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ವಿಜಯಪುರ ಮಾತ್ರವಲ್ಲದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ 1500ಕ್ಕೂ ಹೆಚ್ಚು ಹೆಕ್ಟೇರ್​ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ನಾಶವಾಗಿದೆ.

    MORE
    GALLERIES