Karnataka Elections: ಅಮಿತ್ ಶಾ ಇಂದಿನ ಕಾರ್ಯಕ್ರಮ ಏಕಾಏಕಿ ರದ್ದು, ಕಾರಣವೇನು?

ಕರ್ನಾಟಕ ಚುನಾವಣೆ ಸಮೀಪಿಸುತ್ತಿದೆ. ಹೀಗಿರುವಾಗ ಮತದಾರರ ಓಲೈಕೆಗೆ ಭರ್ಜರಿ ತಯಾರಿ ಆರಂಭವಾಗಿದೆ. ಇದರ ಭಾಗವೆಂಬಂತೆ ರಾಷ್ಟ್ರೀಯ ನಾಯಕರೂ ರಾಜ್ಯದಲ್ಲಿ ಬೀಡು ಬಿಟ್ಟು ಒಂದಾದ ಬಳಿಕ ಮತ್ತೊಂದು ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಆದರೀಗ ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ಯಕ್ರಮಗಳು ಏಕಾಏಕಿ ರದ್ದಾಗಿವೆ. ಅಷ್ಟಕ್ಕೂ ಇದಕ್ಕೆ ಕಾರಣವೇನು? ಮುಂದಿದೆ ವಿವರ.

First published:

  • 16

    Karnataka Elections: ಅಮಿತ್ ಶಾ ಇಂದಿನ ಕಾರ್ಯಕ್ರಮ ಏಕಾಏಕಿ ರದ್ದು, ಕಾರಣವೇನು?

    ಹೌದು ಕರ್ನಾಟಕ ಚುನಾವಣೆ ಸಮೀಪಿಸುತ್ತಿರುವಂತೆಯೇ ಅತ್ತ ರಾಷ್ಟ್ರೀಯ ನಾಯಕರ ದಂಡೇ ಕರ್ನಾಟಕದತ್ತ ಮುಖ ಮಾಡಿದೆ. ಹೀಗೆ ರಾಜ್ಯ ಪ್ರವಾಸ ಕೈಗೊಂಡ ಪ್ರಮುಖ ನಾಯಕರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಒಬ್ಬರು. ಆದರೀಗ ಅವರ ಪ್ರಚಾರ ಕಾರ್ಯ ಏಕಾಏಕಿ ರದ್ದಾಗಿದೆ.

    MORE
    GALLERIES

  • 26

    Karnataka Elections: ಅಮಿತ್ ಶಾ ಇಂದಿನ ಕಾರ್ಯಕ್ರಮ ಏಕಾಏಕಿ ರದ್ದು, ಕಾರಣವೇನು?

    ಅಮಿತ್ ಶಾ ಇಂದು ಮಧ್ಯಾಹ್ನದಿಂದ ರಾತ್ರಿವರೆಗೆ ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವವರಿದ್ದರು. ಆದರೀಗ ಈ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

    MORE
    GALLERIES

  • 36

    Karnataka Elections: ಅಮಿತ್ ಶಾ ಇಂದಿನ ಕಾರ್ಯಕ್ರಮ ಏಕಾಏಕಿ ರದ್ದು, ಕಾರಣವೇನು?

    ಕೊಪ್ಪಳ ಜಿಲ್ಲೆಯ ಕಾರಟಗಿ, ಕುಷ್ಟಗಿ ಹಾಗೂ ಕೊಪ್ಪಳದಲ್ಲಿ ಅಮಿತ್ ಶಾ ಕಾರ್ಯಕ್ರಮ ಆಯೋಜನೆಯಾಗಿತ್ತು. ಆದರೆ ಮಣಿಪುರದಲ್ಲಿ ಹಿಂಸಾಚಾರ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

    MORE
    GALLERIES

  • 46

    Karnataka Elections: ಅಮಿತ್ ಶಾ ಇಂದಿನ ಕಾರ್ಯಕ್ರಮ ಏಕಾಏಕಿ ರದ್ದು, ಕಾರಣವೇನು?

    ಗೃಹ ಸಚಿವರ ಕಾರ್ಯಕ್ರಮ ರದ್ದು ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆಯುಂಟಾಗಿದ್ದು, ಪರ್ಯಾಯವಾಗಿ ಬೇರೆ ಕೇಂದ್ರ ಸಚಿವರಿಂದ ಕೊಪ್ಪಳದಲ್ಲಿ ರೋಡ್ ಶೋ ನಡೆಯಲಿದೆ.

    MORE
    GALLERIES

  • 56

    Karnataka Elections: ಅಮಿತ್ ಶಾ ಇಂದಿನ ಕಾರ್ಯಕ್ರಮ ಏಕಾಏಕಿ ರದ್ದು, ಕಾರಣವೇನು?

    ಮಣಿಪುರದಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಹಿಂಸಾಚಾರ ಹತ್ತಿಕ್ಕಲು ಸೇನೆ ಮತ್ತು ಅಸ್ಸಾಂ ರೈಫಲ್ಸ್​ನ್ನು ಕಣಿವೆ ನಾಡಿಗಡ ರವಾನಿಸಲಾಗಿದೆ.

    MORE
    GALLERIES

  • 66

    Karnataka Elections: ಅಮಿತ್ ಶಾ ಇಂದಿನ ಕಾರ್ಯಕ್ರಮ ಏಕಾಏಕಿ ರದ್ದು, ಕಾರಣವೇನು?

    ಇಂಫಾಲ್, ಚುರಾಚಂದ್‌ಪುರ ಹಾಗೂ ಕಾಂಗ್‌ಪೋಕ್ಪಿಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಮಣಿಪುರ ಸರಕಾರ ರಾಜ್ಯದಲ್ಲಿ 5 ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

    MORE
    GALLERIES