Bengaluru: ಗೋಮಾತೆಗೆ ಮೂತ್ರಪಾನ ಮಾಡಿಸಿದ ನೀಚ; ಫೋಟೋಗಳು ವೈರಲ್
ಬೆಂಗಳೂರು: ಭಾರತದಲ್ಲಿ ಗೋ ಮಾತೆಗೆ ವಿಶೇಷ ಗೌರವ ಕೊಡಲಾಗುತ್ತದೆ. ಹಸುವಿನಲ್ಲಿ ಮುನ್ನೂರು ಕೋಟಿ ದೇವರುಗಳು ನೆಲೆಸಿವೆ ಎಂಬ ನಂಬಿಕೆಯನ್ನು ಹೊಂದಿರುವ ಪುಣ್ಯಭೂಮಿ ಇದಾಗಿದೆ.
1/ 7
ಇನ್ನು ಹಸುವಿನ ಹಾಲನ್ನೇ ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಗೋಹತ್ಯೆ ವಿರೋಧಿಸಿ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಸರ್ಕಾರವೂ ಸಹ ಈ ಸಂಬಂಧ ಕಾನೂನುಗಳನ್ನು ತಂದಿದೆ.
2/ 7
ಆದರೆ ನೀಚನೊಬ್ಬ ತಾನೇ ಸಾಕಿದ ಹಸುವಿಗೆ ಮೂತ್ರಪಾನ ಮಾಡಿಸಿ ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನ ಬನಶಂಕರಿ ಮೂರನೇ ಹಂತದಲ್ಲಿ ಈ ಘಟನೆ ನಡೆದಿದೆ.
3/ 7
ಪ್ರತಿದಿನ ಗಂಜಲ ನೀಡುವ ಪಾತ್ರೆಯಲ್ಲಿ ಈ ವ್ಯಕ್ತಿ ಮೂತ್ರ ಮಾಡುತ್ತಾನೆ. ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಯೇಶ್ ಎಂಬವರು ಟ್ವೀಟ್ ಮಾಡಿದ್ದಾರೆ.
4/ 7
ಈ ಟ್ವೀಟ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಟ್ವಿಟ್ಟರ್ನಲ್ಲಿ ವ್ಯಕ್ತಿ ಮೂತ್ರ ಮಾಡುವ ಮತ್ತು ಹಸು ಗಂಜಲು ಕುಡಿಯುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
5/ 7
ಜಯೇಶ್ ಟ್ವೀಟ್ಗೆ ಪಶುಸಂಗೋಪನಾ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀಡುವಂತೆ ತಿಳಿಸಿದೆ.
6/ 7
ಹಸು ಸಾಕಾಣಿಕೆ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಈ ವ್ಯಕ್ತಿ ಅಧಿಕೃತವಾಗಿ ಶೆಡ್ ನಿರ್ಮಿಸಿ ಹಸು ಸಾಕಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪವನ್ನ ಜಯೇಶ್ ಮಾಡಿದ್ದಾರೆ.
7/ 7
ಈ ಫೋಟೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
First published: