Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಬೃಹತ್ ಮೊತ್ತದ ಲಂಚದೊಂದಿಗೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. 40 ಲಕ್ಷ ಲಂಚ ಪಡೆಯುವಾಗ ಮಾಡಾಳು ಪ್ರಶಾಂತ್ ಬಲೆಗೆ ಬಿದಿದ್ದಾನೆ. ಆದರೆ ಆತನ ಕಚೇರಿಯಲ್ಲಿ ಸಿಕ್ಕಿದ್ದು ಬರೋಬ್ಬರಿ 1 ಕೋಟಿ 62 ಲಕ್ಷ ರೂಪಾಯಿ ಹಣ ಎನ್ನಲಾಗಿದೆ!

First published:

  • 110

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. 40 ಲಕ್ಷ ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಭ್ರಷ್ಟನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

    MORE
    GALLERIES

  • 210

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಬೆಂಗಳೂರು ಜಲಮಂಡಳಿಯಲ್ಲಿ (BWSSB) ಚೀಫ್ ಅಕೌಂಟೆಂಟ್ ಆಗಿರುವ ಮಾಡಾಳು ಪ್ರಶಾಂತ್, ಟೆಂಡರ್ ಕೊಡಿಸುವುದಾಗಿ 80 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಪೈಕಿ 40 ಲಕ್ಷ ರೂಪಾಯಿ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ರೇಡ್ ಮಾಡಿದ್ದಾರೆ.

    MORE
    GALLERIES

  • 310

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಮಾಡಾಳು ಪ್ರಶಾಂತ್ ಕಚೇರಿಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗದಿದೆ. ಹಣದ ರಾಶಿ ನೋಡಿ ಲೋಕಾಯುಕ್ತ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆತನ ಕಚೇರಿಯಲ್ಲಿ 1 ಕೋಟಿ 62 ಲಕ್ಷ ರೂಪಾಯಿ ಹಣ ಸಿಕ್ಕಿದೆ ಅಂತ ಹೇಳಲಾಗುತ್ತಿದೆ.

    MORE
    GALLERIES

  • 410

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಸದ್ಯ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಪ್ರಶಾಂತ್ ಸೇರಿ ಐವರನ್ನು ಬಂಧಿಸಲಾಗಿದೆ. ಪಿಸಿ ಆ್ಯಕ್ಟ್ ಸೆಕ್ಷನ್ 8ರ ಅಡಿ ಉಳಿದ ಇಬ್ಬರು ಕೂಡ ಟೆಂಡರ್ ಗೆ ಹಣ ನೀಡಿದ್ದರು ಎನ್ನಲಾಗಿದೆ. ಈ ಕೇಸ್ನಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಮಾಡಾಳು ಪ್ರಶಾಂತ್ ವಿರುದ್ದ ದೂರು ನೀಡಲಾಗಿತ್ತು.

    MORE
    GALLERIES

  • 510

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಲೋಕಾಯುಕ್ತ ಟ್ರ್ಯಾಪ್ ಮಾಡುವ ಮೊದಲು ಬೇರೆ ಟೆಂಡರ್ಗೆ ಸಂಬಂಧಿಸಿದಂತೆ ಇತರೇ ಮೂವರು ಮಾಡಾಳು ಪ್ರಶಾಂತ್ ಕಚೇರಿಯಲ್ಲಿ ಇದ್ದರು. ಪ್ರಶಾಂತ್ಗೆ ಹಣ ನೀಡಲು ಬಂದಿದ್ದರು ಎನ್ನಲಾಗಿದೆ. ಹೀಗಾಗಿ ಅವರನ್ನೂ ಬಂಧಿಸಲಾಗಿದೆ. ಪ್ರಶಾಂತ್ ಪ್ರಶಾಂತ್, ಅಕೌಂಟೆಂಟ್, ಉಳಿದಂತೆ ಬೇರೆ ಟೆಂಡರ್ಗೆ ಹಣ ನೀಡಲು ಬಂದಿದ್ದ ಮೂವರು ಸೇರಿ ಐವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.

    MORE
    GALLERIES

  • 610

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಮಾಡಾಳು ಪ್ರಶಾಂತ್ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ. ವೃತ್ತಿಯಲ್ಲಿ ಬೆಂಗಳೂರು ಜಲಮಂಡಳಿಯ ಚೀಫ್ ಅಕೌಂಟೆಂಟ್ ಆಗಿದ್ದಾನೆ.

    MORE
    GALLERIES

  • 710

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಮಾಡಾಳು ಪ್ರಶಾಂತ್ ಬರೋಬ್ಬರಿ 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಪೈಕಿ ಬರೋಬ್ಬರಿ 40 ಲಕ್ಷ ಹಣದೊಂದಿಗೆ ಮಾಡಾಳು ಪ್ರಶಾಂತ್ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

    MORE
    GALLERIES

  • 810

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    BWSSBಯಲ್ಲಿ ಚೀಫ್ ಅಕೌಂಟೆಂಟ್ ಆಗಿರುವ ಮಾಡಾಳು ಪ್ರಶಾಂತ್ ಕಚ್ಚಾ ವಸ್ತುಗಳ ಖರೀದಿ ಟೆಂಡರ್ಗಾಗಿ ಕೆಎಸ್ಡಿಎಲ್ ಅಧ್ಯಕ್ಷರ ಪರವಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಹಣ ಕೇಳಿದ್ದ ಎನ್ನಲಾಗಿದೆ. ಈ ವೇಳೆ 40 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್ಪಿ ಅಶೋಕ್, ಇನ್ಸ್ಪೆಕ್ಟರ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದರು.

    MORE
    GALLERIES

  • 910

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಇನ್ನು ಮಾಡಾಳು ಪ್ರಶಾಂತ್ ಖಾಸಗಿ ಕಚೇರಿಯಲ್ಲಿ ಲೋಕಾಯುಕ್ತರಿಂದ ಪರಿಶೀಲನೆ ನಡೆಯುತ್ತಿದೆ. ಪ್ರಶಾಂತ್ ಕಚೇರಿಗೆ ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ಆಗಮಿಸಿದ್ದಾರೆ. ಆತನ ಕಚೇರಿಯಲ್ಲಿರೋ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ.

    MORE
    GALLERIES

  • 1010

    Madalu Prashant: ಮಾಡಾಳು ಮಗನ ಕಚೇರಿಯಲ್ಲಿ ಕಂತೆ ಕಂತೆ ಹಣ! 'ಲೋಕಾ' ದಾಳಿ ವೇಳೆ 1 ಕೋಟಿ 62 ಲಕ್ಷ ಪತ್ತೆ!

    ಇನ್ನು ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಇನ್ನೊಬ್ಬ ಮಗನನ್ನ ಚುನಾವಣೆಗೆ ನಿಲ್ಲಿಸಬೇಕು ಅಂತ ಸಿದ್ದತೆ ನಡೆಸುತ್ತಿದ್ದಾರೆ. ಚನ್ನಗಿರಿ ಕ್ಷೇತ್ರದಿಂದ ಪುತ್ರ ಮಲ್ಲಿಕಾರ್ಜುನನನ್ನು ಈ ಬಾರಿ ಬಿಜೆಪಿಯಿಂದ ನಿಲ್ಲಿಸಲು ಚನ್ನಗಿರಿ ಕ್ಷೇತ್ರದ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷ ಸಿದ್ದತೆ ಮಾಡಿಕೊಳ್ತಾ ಇದ್ದರು. ಇದರ ನಡುವೆ ಪ್ರಶಾಂತ್ ಮಾಡಳ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಶಾಸಕರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

    MORE
    GALLERIES