ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೂ ನಡೆಯುತ್ತದೆ. ಮತ್ತೊಂದೆಡೆ ಬಹುತೇಕ ಅಭ್ಯರ್ಥಿಗಳು ಗೆಲುವಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಒಂದಿಷ್ಟು ಜನರು ಪ್ರಮುಖ ಸಮುದಾಯದ ಸ್ವಾಮೀಜಿಗಳನ್ನು ಭೇಟಿಯಾಗುತ್ತಿದ್ದಾರೆ.
2/ 7
ಕೆಆರ್ ಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಅವರಿಗೆ ನಾಗಾಸಾಧು ಒಬ್ರು ಚುನಾವಣೆ ಭವಿಷ್ಯ ಹೇಳಿದ್ದಾರೆ. ಈ ಭವಿಷ್ಯ ಕೇಳಿದ ಕಾಂಗ್ರೆಸ್ ಅಭ್ಯರ್ಥಿ ಫುಲ್ ಖುಷ್ ಆಗಿದ್ದಾರೆ.
3/ 7
ಹಿಮಾಲಯ ಪರ್ವತದಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಪೂಜೆಗೆಂದು ನಾಗಾಸಾಧು ಬಂದಿದ್ದರು. ಈ ವೇಳೆ ನಾಗಾಸಾಧು ಅವರನ್ನು ಭೇಟಿ ಮಾಡಿದ ದೇವರಾಜು ಆಶೀರ್ವಾದ ಪಡೆದುಕೊಂಡರು.
4/ 7
ಕೈ ಅಭ್ಯರ್ಥಿಯ ದೇವರಾಜು ಮುಖಲಕ್ಷಣ ನೋಡಿ ಶಾಸಕನಾಗುವ ಯೋಗವಿದೆ ಎಂದು ನಾಗಾಸಾಧುಗಳು ಹರಿಸಿದ್ದಾರೆ ಎಂದು ತಿಳಿದು ಬಂದಿದೆ.
5/ 7
ಹೊರಡುವ ವೇಳೆ ನಿನ್ನ ಪರಿಶ್ರಮಕ್ಕೆ ತಕ್ಕ ಗೌರವ ಸಿಗಲಿದೆ. ಆದರೆ ಎಚ್ಚರಿಕೆಯಿಂದ ಇರುವಂತೆ ಎಂಬ ಸಲಹೆಯನ್ನು ನಾಗಾಸಾಧು ನೀಡಿದ್ದಾರೆ ಎನ್ನಲಾಗಿದೆ.
6/ 7
ಕಾಂಗ್ರೆಸ್ ಅಭ್ಯರ್ಥಿ ದೇವರಾಜು ನಾಗಾಸಾಧು ಅವರ ಬಳಿ ಆಶೀರ್ವಾದ ಪಡೆದುಕೊಂಡಿರುವ ಫೋಟೋ ನ್ಯೂಸ್ 18ಗೆ ಲಭ್ಯವಾಗಿದೆ.
7/ 7
ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸಚಿವ ನಾರಾಯಣಗೌಡರು ಸ್ಪರ್ಧೆ ಮಾಡಿದ್ದಾರೆ. 2018ರಲ್ಲಿ ಇದೇ ನಾರಾಯಣಗೌಡರು ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು.
First published:
17
Karnataka Polls: ಚುನಾವಣೆಯಲ್ಲಿ ಗೆಲ್ತೀಯಾ; ನಾಗಾಸಾಧು ಭವಿಷ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಖುಷ್
ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೂ ನಡೆಯುತ್ತದೆ. ಮತ್ತೊಂದೆಡೆ ಬಹುತೇಕ ಅಭ್ಯರ್ಥಿಗಳು ಗೆಲುವಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಒಂದಿಷ್ಟು ಜನರು ಪ್ರಮುಖ ಸಮುದಾಯದ ಸ್ವಾಮೀಜಿಗಳನ್ನು ಭೇಟಿಯಾಗುತ್ತಿದ್ದಾರೆ.