ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ, ಸಂಕೀರ್ತನಾ ಯಾತ್ರೆಗೆ ನಿರ್ಬಂಧ

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಿಂದ ಅಂಜನಾದ್ರಿ ಬೆಟ್ಟದವರೆಗೆ ನಡೆಯುತ್ತಿದ್ದ ಹನುಮ ಮಾಲಾಧಾರಿಗಳ ಮೆರವಣಿಗೆಗೆ ಕೊಪ್ಪಳ ಜಿಲ್ಲಾಡಳಿತ ನಿರ್ಬಂಧ ಹೇರಿದೆ, ಓಮೈಕ್ರಾನ್ ಮತ್ತು ಕೋವಿಡ್ -19 ಸೋಂಕಿನ ಹಿನ್ನೆಲೆ ಜಿಲ್ಲಾಡಳಿತ ಸಭೆ ನಡೆಸಿ ಈ ಸೂಚನೆ ಹೊರಡಿಸಿದೆ.

First published:

  • 15

    ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ, ಸಂಕೀರ್ತನಾ ಯಾತ್ರೆಗೆ ನಿರ್ಬಂಧ

    16-12-2021ರಂದು ನಡೆಯುವ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮ  ನಡೆಯಲಿದ್ದು, ಸದರಿ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 30 ರಿಂದ 40 ಸಾವಿರ ವರೆಗೆ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಅಂಜನಾದ್ರಿ ಬೆಟ್ಟದಲ್ಲಿ ಪವಮಾನ ಹೋಮಕ್ಕೆ ಅರ್ಚಕರ ವ್ಯವಸ್ಥೆ  ಹಾಗೂ ಇತರೆ ಮೂಲಭೂತ ಸೌಕರ್ಯ, ಪಾರ್ಕಿಂಗ್ ಹಾಗೂ ಗಂಗಾವತಿ ನಗರದಿಂದ ಹೊರಡುವ ಸಂಕೀರ್ತನಾ ಯಾತ್ರೆಗೆ ಭದ್ರತೆ ನೀಡುವಂತೆ ಕೋರಿ ಜಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲಾಗಿತ್ತು.  

    MORE
    GALLERIES

  • 25

    ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ, ಸಂಕೀರ್ತನಾ ಯಾತ್ರೆಗೆ ನಿರ್ಬಂಧ

    ಈ ಸಂಬಂಧ  ಜಿಲ್ಲಾಡಳಿತ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರ ಸಭೆ ಗಂಗಾವತಿ ಹಾಗೂ ಹನುಮಮಾಲಾ ಕಾರ್ಯಕ್ರಮದ ಆಯೋಜಕರ ಜೊತೆ ಡಿಸೆಂಬರ್ 9ರಂದು ಸಭೆ ನಡೆಸಿತ್ತು.

    MORE
    GALLERIES

  • 35

    ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ, ಸಂಕೀರ್ತನಾ ಯಾತ್ರೆಗೆ ನಿರ್ಬಂಧ

    ಈ ಸಭೆಯಲ್ಲಿ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮತ್ತು ಸೋಂಕು ಪ್ರಸರಣ ನಿಯಂತ್ರಿಸುವ ನಿಟ್ಟಿನಲ್ಲಿ9 ಸದರಿ ಕಾರ್ಯಕ್ರಮವನ್ನು ನಿರ್ಬಂಧಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

    MORE
    GALLERIES

  • 45

    ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ, ಸಂಕೀರ್ತನಾ ಯಾತ್ರೆಗೆ ನಿರ್ಬಂಧ

    ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಬರದೇ ಮನೆಗಳಲ್ಲಿ ಮಾಲೆಯನ್ನು ವಿಸರ್ಜಿಸಬೇಕು ಎಂದು ಜಿಲ್ಲಾಡಳಿಯ ಮನವಿ ಮಾಡಿಕೊಂಡಿದೆ. ಹನುಮ ಮಾಲಾ ವಿಸರ್ಜನೆ, ಸಾಂಪ್ರಾದಾಯಿಕ, ಸರಳವಾಗಿ ಆಚರಿಸಲು ಸೂಚನೆ ನೀಡಲಾಗಿದೆ.

    MORE
    GALLERIES

  • 55

    ಈ ಬಾರಿ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆ, ಸಂಕೀರ್ತನಾ ಯಾತ್ರೆಗೆ ನಿರ್ಬಂಧ


    ಹನುಮ ಜಯಂತಿಯಂದು ಭಕ್ತರು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯುತ್ತದೆ. ಹನುಮ ಜಯಂತಿಯಂದು ನಿರ್ಮಲ ಸೇವೆ, ಅಲಂಕಾರ, ಸಹಸ್ರನಾಮಾವಳಿ ಪಠಣ, ಹನುಮಸ್ತೋತ್ರ ಪಠಣದಂತ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ.

    MORE
    GALLERIES