Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಯಾರೇ ಆಗಲಿ ಮಾಡಬಾರದ್ದು‌ ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೇ ಆಗಲಿ ತಪ್ಪು ಇರಲಿ ಸರಿ ಇರಲಿ. ನಾವು ಏನು ಮಾಡುತ್ತೇವೆ ಬಿತ್ತಿದ್ದೆ ಬೆಳೆಯೋದು ಎಂದು ಎಚ್ಚರಿಕೆ ಕೋಡಿಮಠ ಶ್ರೀಗಳು ಎಚ್ಚರಿಕೆ ನೀಡಿದರು.

First published:

  • 17

    Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

    ಬಾಗಲಕೋಟೆ: ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ. ಆಗೋದಿಲ್ಲ ಅಂತ ಹೇಳೋದಿಲ್ಲ, ಆದರೆ ಈ ಬಗ್ಗೆ ನಿಖರವಾಗಿ ಯುಗಾದಿ ಭವಿಷ್ಯದಲ್ಲಿ ಹೇಳ್ತೀನಿ. ಆದರೆ ಚುನಾವಣೆಯಲ್ಲಿ ರಾಜಕೀಯ ಅಸ್ಥಿರತೆ ಇದ್ದು, ರಾಜಕೀಯ ಪಕ್ಷಗಳು ಒಡೆಯುತ್ತವೆ. ಪಕ್ಷಾಂತರಗಳು ಇರುತ್ತವೆ, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಚುನಾವಣೆ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

    MORE
    GALLERIES

  • 27

    Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

    ಜಮಖಂಡಿಯಲ್ಲಿ ಮಾತನಾಡಿ ರಾಜಕೀಯ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೋಡಿ ಶ್ರೀಗಳು, ಈ ಬಗ್ಗೆ ನಿಖರ ಮಾಹಿತಿ ನೀಡಲು ಯುಗಾದಿ ಆಗಬೇಕು. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಬಳಿಕ ಭವಿಷ್ಯದ ನುಡಿಗಳನ್ನು ಹೇಳುತ್ತೇವೆ. ಸಂಕ್ರಾಂತಿ ಫಲ ಇರುವುದು ರಾಜರು, ರೈತರು, ವ್ಯಾಪಾರಸ್ಥರಿಗೆ ಬರುತ್ತದೆ. ಇದರ ಪ್ರಕಾರ ಮುಂದಿನ ಎರಡ್ಮೂರು ಇಸವಿ ಬಹಳ ಕಷ್ಟ ಇದೆ. ಎಷ್ಟು ಸುಖ ಇದೆಯೋ ಅಷ್ಟೇ ಕಷ್ಟ ಇದೆ ಎಂದರು.

    MORE
    GALLERIES

  • 37

    Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

    ಮೊನ್ನೆ ಹೊಸಪೇಟೆಯಲ್ಲಿ ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು ಹೇಳಿದ್ದೇವು. ನಾವು ಹೇಳಿದ ಮರು ದಿನವೇ ನೇಪಾಳದಲ್ಲಿ ವಿಮಾನ ಅಪಘಾತವಾಗಿ 50 ಮಂದಿ ಸಾವನ್ನಪ್ಪಿದ್ದರು. ಆದ್ದರಿಂದ ಯುಗಾದಿ ಬಳಿಕ ಮುಂದಿನ ವಿವರಗಳನ್ನು ಹೇಳುತ್ತೇನೆ ಎಂದರು.

    MORE
    GALLERIES

  • 47

    Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

    ರಾಜಕೀಯ ಅಸ್ಥಿರತೆ ಇದೆ. ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ. ಚುನಾವಣೆವರೆಗೂ ಚುನಾವಣೆವರೆಗೂ ಏನು ಹೇಳೋಕೆ ಆಗೋದಿಲ್ಲ. ಎಲ್ಲಾ ಡಿವೈಡ್ ಆಗುವ ಲಕ್ಷಣ ಇದೆ‌, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.

    MORE
    GALLERIES

  • 57

    Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

    ರಾಜಕೀಯ ಪರಿಸ್ಥಿತಿ ಬಗ್ಗೆ ಏನ್​ ಹೇಳ್ತೀರಿ ಅಂದರೆ, ಯಾರೇ ಆಗಲಿ ಮಾಡಬಾರದ್ದು‌ ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೇ ಆಗಲಿ ತಪ್ಪು ಇರಲಿ ಸರಿ ಇರಲಿ. ನಾವು ಏನು ಮಾಡುತ್ತೇವೆ ಬಿತ್ತಿದ್ದೆ ಬೆಳೆಯೋದು. ಏನ್ ಬಿತ್ತುತ್ತೇವೆ ಅದೇ ಬೆಳೆಯುತ್ತದೆ. ಮಾಡಬಾರದು ಮಾಡಿದರೆ ಆಗಬಾರದ್ದು ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.

    MORE
    GALLERIES

  • 67

    Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

    ರಾಹುಲ್ ಗಾಂಧಿ ಭಾರತ ಜೋರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಚುನಾವಣೆವರೆಗೂ ಪಕ್ಷಾಂತರಗಳು ಇರುತ್ತವೆ. ರಾಜಕೀಯ ಪಕ್ಷಗಳು ಒಡೆಯುತ್ತವೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಮುಂದೆ ಎಷ್ಟು ಸುಖವಿದೆ ಅಷ್ಟು ಕಷ್ಟವಿದೆ ಎಂದರು.

    MORE
    GALLERIES

  • 77

    Kodi Mutt Swamiji: ಎಲ್ಲಾ ಡಿವೈಡ್ ಆಗುತ್ತೆ, ಒಂದೇ ಪಕ್ಷಕ್ಕೆ ಅಧಿಕಾರ ಬರುತ್ತೆ! ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

    ಕೊರೊನಾದಿಂದ ಅಂತಹ ಯಾವುದೇ ಅನಾಹುತ ಆಗೋದಿಲ್ಲ. ಪ್ರಕೃತಿ ವಿಕೋಪಗಳು ನಡೆಯುತ್ತದೆ. ಆದರೆ ಈ ಬಗ್ಗೆ ಯುಗಾದಿ ಭವಿಷ್ಯದಲ್ಲಿ ನಿಖರ ಮಾಹಿತಿ ನೀಡುತ್ತೇವೆ. ಇದೇ ವೇಳೆ ಜಮಖಂಡಿ ಭೇಟಿ ವಿಚಾರವಾಗಿ ಮಾತನಾಡಿದ ಶ್ರೀಗಳು, ಜಮಖಂಡಿ ಮಠಕ್ಕೆ ನಾನು ಹಳೆಯ ವ್ಯಕ್ತಿ. ಈ ಊರು ಬಹಳ ಬೆಳೆದಿದೆ. ಜಮಖಂಡಿ ಮೈಸೂರು ರೀತಿ ಆಗಿದೆ. ಹೆಚ್ಚಿನ ಅಭಿವೃದ್ಧಿ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    MORE
    GALLERIES