Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

ಕೊಡಗು : ತಮ್ಮ ಗದ್ದೆಗಳಲ್ಲಿ ಕದಿರು ತೆಗೆದು ಸಂಭ್ರಮ, ಭಕ್ತಿಯಿಂದ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡಿದ್ದ ಕೊಡವರು ಇಂದು ಊರು ಮಂದ್ ಗಳಲ್ಲಿ ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅನಾವರಣಗೊಳಿಸಿ ಸಂಭ್ರಮಿಸಿದರು.

First published:

  • 17

    Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

    ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಕಾವೇರಮ್ಮನಿಗೆ ನಮಿಸಿ ಉಮ್ಮತ್ತಾಟ್ ನೃತ್ಯ ಮಾಡಿದರು. ಜೊತೆಗೆ ಬೊಳಕ್ಕಾಟ್ ನೃತ್ಯ ಮಾಡಿದರು. ಇನ್ನು ಪುರುಷರು ಬೊಳಕ್ ಆಟ್ ಪ್ರದರ್ಶಿಸಿದರು. ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣದಲ್ಲಿ ಕಂಡು ಬಂದ ಕೊಡವ ಸಾಂಸ್ಕೃತಿಕ ವೈಭವ. ಪುತ್ತರಿ ಹಬ್ಬದ ಅಂಗವಾಗಿ ಭಾನುವಾರ ಮಡಿಕೇರಿಯ ಕೋಟೆ ಆವರಣದಲ್ಲಿ ಪಾಂಡೇರ ಕುಟುಂಬಸ್ಥರು ಆಯೋಜಿಸಿಧ್ದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    MORE
    GALLERIES

  • 27

    Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

    ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಪುರುಷರ ಕೊಡವ ಸಾಂಪ್ರದಾಯಿಕ ಉಡುಗೆ ಕುಪ್ಪಿಚಾಲೆ ತೊಟ್ಟು ಕೋಲಾಟ್ ಪ್ರದರ್ಶಿಸಿದರು. ಮಧ್ಯದಲ್ಲಿ ನಿಂತ ತಂಡವು ದುಡಿಕೊಟ್ಟು ಪಾಟ್ ನುಡಿಸುತ್ತಿದ್ದರೆ ಅದರ ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕಿದ ನೃತ್ಯಗಾರರು, ಕೋಲಾಟ್ ಪ್ರದರ್ಶಿಸಿದರು. ಅಲ್ಲದೆ ಶೌರ್ಯದ ನೃತ್ಯವಾಗಿರುವ ಪರಿಯಕಳಿಯನ್ನ ಮಾಡಿ ಎಲ್ಲರ ಮೈನವಿರೇಳುವಂತೆ ಮಾಡಿದರು.

    MORE
    GALLERIES

  • 37

    Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

    ಅದರಲ್ಲೂ ಚಿಕ್ಕ ಮಕ್ಕಳು ಕೂಡ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪರಿಯಕಳಿ ಪ್ರದರ್ಶಿಸಿದ ಪರಿಯಂತು ಎಲ್ಲರನ್ನು ಹುಬ್ಬೇರುವಂತೆ ಮಾಡಿತು. ಮಹಿಳೆಯರು ಉಮ್ಮತ್ತಾಟ್ ಮತ್ತು ಬೊಳಕ್ಕಾಟ್ ಪ್ರದರ್ಶಿದರು. ಕೊನೆಯಲ್ಲಿ ಕೊಡವ ವಾಲಗಕ್ಕೆ ಮಕ್ಕಳು, ಮಹಿಳೆಯರು ಪುರುಷರೆನ್ನದೆ ಎಲ್ಲರೂ ಸಾಮೂಹಿಕವಾಗಿ ಕೊಡವ ನೃತ್ಯ ಮಾಡಿ ಎಂಜಾಯ್ ಮಾಡಿದ್ರು.

    MORE
    GALLERIES

  • 47

    Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

    ಕೊಡಗಿನ ರಾಜರ ಕೋಟೆಯನ್ನು ನೋಡಲು ಬಂದಿದ್ದ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಪ್ರವಾಸಿಗರು ಕೊಡವ ಸಾಂಪ್ರದಾಯಿಕ ನೃತ್ಯಗಳನ್ನು ನೋಡಿ ಸಂತೋಷಪಟ್ಟರೆ, ಕೆಲವು ಪ್ರವಾಸಿಗರು ಸಾಮೂಹಿಕ ನೃತ್ಯದಲ್ಲಿ ತಾವು ಭಾಗವಹಿಸಿ ಕುಣಿದು ಮನತಣಿಸಿಕೊಂಡರು.

    MORE
    GALLERIES

  • 57

    Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

    ಈ ವೇಳೆ ಪ್ರತಿಕ್ರಿಯಿಸಿದ ಪಾಂಡೇರ ಮುತ್ತಣ್ಣ ಕೊಡಗಿನ ರಾಜರ ಕಾಲದಿಂದಲೂ ಪುತ್ತರಿ ಹಬ್ಬದ ಮಾರನೆಯ ದಿನ ಕೋಟೆ ಆವರಣದಲ್ಲಿ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಅದು ಕೋಟೆ ಆವರಣಕ್ಕೆ ಬದಲಾಗಿ ಓಂಕಾರೇಶ್ವರ ದೇವಾಲಯದಲ್ಲಿ ನಡೆಯುತ್ತಿತ್ತು.

    MORE
    GALLERIES

  • 67

    Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

    ನಂತರ ನಮ್ಮ ಕುಟುಂಬಸ್ಥರು, ಜಿಲ್ಲಾಡಳಿತ ಮತ್ತು ಪ್ರಮುಖರೆಲ್ಲರೂ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತೆ ಇಲ್ಲಿಯೇ ನಡೆಯುವುದಕ್ಕೆ ಅವಕಾಶ ದೊರೆಯಿತು. ಹೀಗಾಗಿ ಮತ್ತೆ ಕೋಟೆ ಆವರಣದಲ್ಲಿಯೇ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಷಯ ಎಂದರು.

    MORE
    GALLERIES

  • 77

    Madikeri ಕೋಟೆ ಆವರಣದಲ್ಲಿ ಅನಾವರಣಗೊಂಡ ಕೊಡವರ ಸಾಂಸ್ಕೃತಿಕ ವೈಭವ; ಉಮ್ಮತ್ತಾಟ್, ಬೊಳ್ಳಕಾಟ್ ಸಂಭ್ರಮ

    ಹುತ್ತರಿ ದಿನ ಓಂಕಾರೇಶ್ವರ ದೇವಾಲಯದಲ್ಲಿ ತಕ್ಕಮುಖ್ಯಸ್ಥರ ನೇತೃತ್ವದಲ್ಲಿ ಕದಿರು ತೆಗೆಯಲಾಗುತ್ತದೆ. ಮಾರನೆ ದಿನ ನಮ್ಮ ಕುಟುಂಬದವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೊಳಕ್ಕಾಟ್ ಮತ್ತು ಉಮ್ಮತ್ತಾಟ್ ನೃತ್ಯ ಮಾಡಿದ ಶಿಲ್ಪಾ ಅವರು ಮಾತನಾಡಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಇದೊಂದು ಸದಾವಕಾಶವಾಗಿದ್ದು, ತೀವ್ರ ಸಂತೋಷವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    MORE
    GALLERIES