Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೆ ಯಾದಗಿರಿ ಜಿಲ್ಲೆಯಲ್ಲಿ ಜನರು ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಬಿಸಿಲಿನ ತಾಪ ತಪ್ಪಿಸಲು ಯಾದಗಿರಿ ನಗರಸಭೆ ರಸ್ತೆಗಳಲ್ಲಿ ನೀರು ಸಿಂಪಡಣೆ ಮಾಡುತ್ತಿದೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭರ್ಜರಿ ಮಳೆಯಾಗಿದ್ದು, ಹಲವು ಕಡೆ ಭಾರೀ ಬಿರುಗಾಳಿಯೊಂದಿಗೆ ಸುರಿದ ಅಕಾಲಿಕ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ.

    MORE
    GALLERIES

  • 27

    Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

    ರಾಜ್ಯದ ಚಿಕ್ಕಮಗಳೂರು, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಮಹಾ ಮಳೆಗೆ ಇಂದು ರಾಜ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನಲ್ಲಿ ಬೈಕ್​ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಪ್ಪಳದಲ್ಲಿ ಸಿಡಲಿಗೆ 16 ವರ್ಷದ ಬಲಿಯಾಗಿದ್ದಾನೆ. ಉಳಿದಂತೆ ಬೆಂಗಳೂರಿನಲ್ಲಿ ಮಳೆ ನೀರಿನಲ್ಲಿ ಮುಳುಗಿ ಯುವತಿ ಸಾವನ್ನಪ್ಪಿದ್ದಾಳೆ.

    MORE
    GALLERIES

  • 37

    Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

    2023ರ ಮಳೆಗೆ ಕಾಫಿನಾಡಲ್ಲಿ ಮೊದಲ ಬಲಿಯಾಗಿದ್ದು, ಬೈಕ್ ಮೇಲೆ ಬಿದ್ದ ಮರ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ಘಟನೆ ನಡೆದಿದ್ದು, ವೇಣುಗೋಪಾಲ್ (45) ಮೃತ ದುರ್ದೈವಿಯಾಗಿದ್ದಾರೆ. ಮೃತರು ಚಿಕ್ಕಹಳ್ಳ ಗ್ರಾಮದಲ್ಲಿ ಹೋಂ ಸ್ಟೇ ನಡೆಸುತ್ತಿದ್ದರು. ಹೋಂ ಸ್ಟೇ ತುಸು ದೂರದಲ್ಲೇ ದುರ್ಘಟನೆ ನಡೆದಿದೆ.

    MORE
    GALLERIES

  • 47

    Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

    ಒಂದೇ ಒಂದು ನಿಮಿಷ ತಡವಾಗಿದ್ದರೆ ಮೃತ ವೇಣುಗೋಪಾಲ್ ಮನೆ ಸೇರಿಕೊಳ್ಳುತ್ತಿದ್ದರು. ಮೂಲತಃ ಉತ್ತರ ಕರ್ನಾಟಕ ಮೂಲದ ವೇಣುಗೋಪಾಲ್ ಮೂಡಿಗೆರೆಯಲ್ಲಿ ಮದುವೆಯಾಗಿ ಇಲ್ಲೇ ವಾಸವಿದ್ದರು. ಒಂದರ ಹಿಂದೆ ಒಂದರಂತೆ ಒಂದೇ ಕಾಲಕ್ಕೆ ಮೂರು ಮರಗಳು ಬಿದ್ದಿ ಪರಿಣಾಮ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಣು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಲ್ದೂರು ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    MORE
    GALLERIES

  • 57

    Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

    ಕೊಪ್ಪಳ ತಾಲೂಕಿನ ಶಿವಪುರದಲ್ಲಿ ಸಿಡಿಲು ಬಡಿದು 16 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಶ್ರೀಕಾಂತ ದೊಡ್ಡನಗೌಡ್ರ ಮೇಟಿ (16) ಮೃತ ಯುವಕನಾಗಿದ್ದು, ಇಂದು ಮಧ್ಯಾಹ್ನ ಘಟನೆ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    MORE
    GALLERIES

  • 67

    Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

    ಇತ್ತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಮಳೆಯ ಆರ್ಭಟಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಿಟ್ಟಿದ್ದ ಮಾವು ಫಸಲು ಮಣ್ಣು ಪಾಲಾಗಿದೆ. ಶ್ರೀನಿವಾಸಪುರ ತಾಲುಕು ಸೇರಿದಂತೆ ಜಿಲ್ಲೆಯ ಹಲವು ಕಡೆ ಮಳೆಯಿಂದಾಗಿ ಮಾವಿನ ಕಾಯಿಗಳು ನೆಲಕ್ಕುರುಳಿದೆ. ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲಿಕಿದ ರೈತರಿಗೆ ಪರಿಹಾರ ನೀಡಲು ಮಾವು ಬೆಳೆಗಾರರ ಒತ್ತಾಯ ಮಾಡಿದ್ದಾರೆ.

    MORE
    GALLERIES

  • 77

    Karnataka Rains: ಬೈಕ್​​ ಮೇಲೆ ಮರ ಉರುಳಿ ಬಿದ್ದು ಸವಾರ ಸಾವು; ಸಿಡಿಲು ಬಡಿದು ಕೊನೆಯುಸಿರೆಳೆದ 16ರ ಬಾಲಕ!

    ಇನ್ನು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೆ ಯಾದಗಿರಿ ಜಿಲ್ಲೆಯಲ್ಲಿ ಜನರು ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಬಿಸಿಲಿನ ತಾಪ ತಪ್ಪಿಸಲು ಯಾದಗಿರಿ ನಗರಸಭೆ ರಸ್ತೆಗಳಲ್ಲಿ ನೀರು ಸಿಂಪಡಣೆ ಮಾಡುತ್ತಿದೆ. ಯಾದಗಿರಿ ನಗರದ ಪ್ರಮುಖ ರಸ್ತೆಗಳ ಮೇಲೆ ಇಂದು ನೀರು ಸಿಂಪಡಣೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

    MORE
    GALLERIES