Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

ಸದ್ಯ ಪೊಲೀಸರು ಹಣದೊಂದಿಗೆ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬಂಗಾರಪೇಟೆ ಚುನಾವಣಾಧಿಕಾರಿ ಶೃತಿ ಪರಿಶೀಲನೆ ನಡೆಸಿದ್ದಾರೆ.

First published:

  • 17

    Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

    ಕೋಲಾರ: ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಚುನಾವಣಾ ಅಕ್ರಮಗಳಿಗೆ ಬ್ರೇಕ್​ ಹಾಕಲು ಮುಂದಾಗಿರುವ ಚುನಾವಣಾ ಅಧಿಕಾರಿಗಳು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

    ಹೌದು, ಕೋಲಾರದ ಚುನಾವಣಾ ಅಧಿಕಾರಿಗಳು ಇಂದು ಬರೋಬ್ಬರಿ 4.5 ಕೋಟಿ ರೂಪಾಯಿ ನಗದು ಹಣವನ್ನು ಸೀಜ್ ಮಾಡಿದ್ದಾರೆ. ವಶಕ್ಕೆ ಪಡೆದುಕೊಂಡಿರುವ ಹಣವನ್ನು ವಿಧಾನಸಭೆ ಚುನಾವಣೆ ಹಿನ್ನಲೆ ಮತದಾರರಿಗೆ ಹಂಚಲು ಇರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ

    MORE
    GALLERIES

  • 37

    Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

    ಅಂದಹಾಗೇ, ಭಾರೀ ಮೊತ್ತದ ಹಣವನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ವಿಲ್ಲಾ ರಿಯಲ್​ ಎಸ್ಟೇಟ್ ಉದ್ಯಮಿ ರಮೇಶ್​ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ರಮೇಶ್​ ಅವರು ಬಂಗಾರಪೇಟೆ ಕಾಂಗ್ರೆಸ್ ಅಭ್ಯರ್ಥಿ ಎಸ್​ಎನ್​ ನಾರಾಯಣಸ್ವಾಮಿ ಅವರಿಗೆ ಆಪ್ತರು ಎನ್ನಲಾಗಿದೆ.

    MORE
    GALLERIES

  • 47

    Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

    ಇನ್ನು, ಹಣವನ್ನ ಬಂಗಾರಪೇಟೆ ಕ್ಷೇತ್ರ ಪಂಚಾಯತಿಯ ಪ್ರತಿ ಬೂತ್​​​ಗೆ ಹೆಸರು ಬರೆದು ಪ್ರತ್ಯೇಕವಾಗಿ ಹಣವನ್ನು ಇಟ್ಟಿದ್ದರು ಎನ್ನಲಾಗಿದ್ದು, ಹಣ ಕಾಂಗ್ರೆಸ್ ಮುಖಂಡರಿಗೆ ಸೇರಿದೆಯೆಂಬ ಶಂಕೆ ವ್ಯಕ್ತವಾಗಿದೆ.

    MORE
    GALLERIES

  • 57

    Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

    ವಶಕ್ಕೆ ಪಡಿಸಿಕೊಂಡಿರುವ ಭಾರೀ ಮೊತ್ತದ ಹಣದಲ್ಲಿ 500, 200 ಹಾಗೂ 100 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳನ್ನು ಒಳಗೊಂಡಿದೆ. ಕೆಜಿಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹಣ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕೆಜಿಎಫ್​ ಪೊಲೀಸರು ನಿಖರ ದಾಳಿ ನಡೆಸಿದ್ದಾರೆ.

    MORE
    GALLERIES

  • 67

    Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

    ಕೆಜಿಎಫ್ ಎಸ್​​ಪಿ ಧರಣಿದೇವಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ದಾಳಿ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರಿನಲ್ಲಿ ಹಣ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 77

    Cash Seized: ಕಾಂಗ್ರೆಸ್​​​ ಅಭ್ಯರ್ಥಿ ಆಪ್ತನ ವಿಲ್ಲಾ ಬಳಿ ಬರೋಬ್ಬರಿ 4.5 ಕೋಟಿ ನಗದು ಸೀಜ್​​; ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ!

    ಸದ್ಯ ಪೊಲೀಸರು ಹಣದೊಂದಿಗೆ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬಂಗಾರಪೇಟೆ ಚುನಾವಣಾಧಿಕಾರಿ ಶೃತಿ ಪರಿಶೀಲನೆ ನಡೆಸಿದ್ದಾರೆ.

    MORE
    GALLERIES