Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

ಅಂತೂ ಇಂತೂ ಚುನಾವಣಾ ಭರಾಟೆ ಒಂದು ಹಂತದಲ್ಲಿ ಕೊನೆಗೊಂಡಿದೆ. ಕಾಂಗ್ರೆಸ್​ ಗೆಲುವಿನ ಬಳಿಕ ಆರಂಭವಾಗಿದ್ದ ಸಿಎಂರೇಸ್​ನಲ್ಲಿ ಸಿದ್ದರಾಮಯ್ಯ ಮುಂಚೂಣಿ ಕಾಪಾಡಿಕೊಂಡಿದ್ದು, ಶನಿವಾರ ಪ್ರಮಾಣವಚನ ಕಾರ್ಯಕ್ರಮ ನೆರವೇರಲಿದೆ. ಆದರೀಗ ಸಿಎಂ ಯಾರೆಂಬ ತಲೆನೋವು ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್​ ಪಾಳಯಕ್ಕೆ ಮತ್ತೊಂದು ತಲೆನೋವು ಕಾಡಲಾರಂಭಿಸಿದೆ.

  • News18 Kannada
  • |
  •   | Bangalore [Bangalore], India
First published:

  • 17

    Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

    ಹೌದು ಸಿದ್ದರಾಮಯ್ಯಗೆ ಸಿಎಂ ಹಾಗೂ ಡಿಕೆಶಿಗೆ ಡಿಸಿಎಂ ಸ್ಥಾನ ನೀಡಿದ ಕಾಂಗ್ರೆಸ್​ ಹೈಕಮಾಂಡ್​ಗೆ ಇಬ್ಬರ ಬಣದವರಿಗೆ ಮಂತ್ರಿ ಸ್ಥಾನ ನೀಡುವುದೇ ಸವಾಲಾಗಿದೆ.

    MORE
    GALLERIES

  • 27

    Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

    ಈ ವಿಚಾರವಾಗಿ ಚರ್ಚಿಸಲು ಇಂದು ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲದೇ ಇಬ್ಬರೂ ನಾಯಕರು ತಮ್ಮ ತಮ್ಮ ಬಣದವರಿಗೆ ಸಂಪುಟದಲ್ಲಿ ಹೆಚ್ಚು ಸ್ಥಾನ ಕೊಡಿಸಲು ಪಟ್ಟಿಯನ್ನೂ ಸಿದ್ದಪಡಿಸಿದ್ದಾರೆ.

    MORE
    GALLERIES

  • 37

    Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

    ತಮ್ಮ ಬಣದಲ್ಲಿರುವ ಸಂಭಾವ್ಯ ಸಚಿವರ ಪಟ್ಟಿಯನ್ನು ಸಿದ್ದಪಡಿಸಿಕೊಂಡಿರುವ ನಾಯಕರು ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ವರಿಷ್ಠರ ಬಳಿ ಇಂದು ಕಸರತ್ತು ನಡೆಸುತ್ತಿದ್ದಾರೆ.

    MORE
    GALLERIES

  • 47

    Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

    ಈ ಹಿಂದೆ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ನಡುವೆ ಸಿಎಂ ಆಯ್ಕೆಯ ಸವಾಲು ಎದುರಿಸಿದ್ದ ಹೈಕಮಾಂಡ್​ಗೆ ಈಗ ಅವರ ಬಣದವರಿಗೆ ಮಂತ್ರಿ ಸ್ಥಾನ ಕೊಡಿಸಬೇಕಾದ ಸವಾಲು ಎದ್ದಿದೆ.

    MORE
    GALLERIES

  • 57

    Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

    ಮತ್ತೊಂದೆಡೆ ನಾಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಭರದ ಸಿದ್ಧತೆ ಆರಂಭವಾಗಿದೆ.

    MORE
    GALLERIES

  • 67

    Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

    ಫ್ಲೆಕ್ಸ್​ ಹಾಗೂ ಬ್ಯಾನರ್​ಗಳು ಈಗಾಗಲೃಏ ರಾರಾಜಿಸುತ್ತಿದ್ದು, ಬ್ಯಾನರ್​ಗಳಲ್ಲಿ ಸಿದ್ದರಾಮಯ್ಯ ಪೋಟೊ ಹಾಕಿ ಶುಭಾಶಯ ಕೋರಲಾಗಿದೆ.

    MORE
    GALLERIES

  • 77

    Karnataka Politics: ಕಾಂಗ್ರೆಸ್​ ಹೈಕಮಾಂಡ್​ಗೆ ಮತ್ತೊಂದು ತಲೆನೋವು: ಸಿದ್ದು, ಡಿಕೆಶಿ ಮತ್ತೆ ದೆಹಲಿಯತ್ತ!

    ಮತ್ತೊಂದೆಡೆ ಲಾರಿಗಳಲ್ಲಿ ಬ್ಯಾರಿಕೇಡ್, ರೆಡ್ ಮ್ಯಾಟ್, ಹಾಗೂ ಸೌಂಡ್ ಸ್ಪೀಕರ್​ಗಳನ್ನೂ ರವಾನಿಸಲಾಗುತ್ತಿದೆ.

    MORE
    GALLERIES