ಅನುಮೋದಿತ ಕಂದಾಯ ಕೊರತೆಯನ್ನು ಸರಿದೂಗಿಸಲು ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ(ಕೆಇಆರ್ಸಿ)ದಿಂದ ಅನುಮೋದನೆ ನೀಡಿದೆ. ವಿದ್ಯುತ್ ಸಂಸ್ಥೆಗಳ ಆದಾಯ ಕೊರತೆಗೆ ಕಾರಣಗಳನ್ನು ನೋಡುವುದಾದರೆ, ಕಲ್ಲಿದ್ದಲು ಖರೀದಿ ವೆಚ್ಚ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಾಗಿದ್ದು, ನೌಕರರ ವೇತನ ಮತ್ತು ಭತ್ಯೆ ಶೇಕಡಾ 20ರಷ್ಟು ಪರಿಷ್ಕರಣೆ ಮಾಡಲಾಗಿದೆ. ಬಂಡಾವಳ ಹೂಡಿಕೆ ಹೆಚ್ಚಳ ಮತ್ತು ಬ್ಯಾಂಕ್ಗಳ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)
ರಿಯಾಯಿತಿ ಇಂಧನ ದರ ಯೋಜನೆಯಡಿಯಲ್ಲಿ ಪ್ರತಿ ಯೂನಿಟ್ಗೆ 6 ರೂಪಾಯಿ 5 ರೂಪಾಯಿಗೆ ಇಳಿಕೆ ಮಾಡಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು, ಇವಿ ಚಾರ್ಜಿಂಗ್ ಸ್ಟೇಷನ್ಗೆ ಪ್ರತಿ ಯೂನಿಟ್ಗೆ ಇದ್ದ ವಿದ್ಯುತ್ ಬಳಕೆ ಶುಲ್ಕ ರೂ. 5ರಿಂದ 4.50ಕ್ಕೆ ಇಳಿಕೆ ಮಾಡಲಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿ ಯೂನಿಟ್ಗೆ ಇದ್ದ 50 ಪೈಸೆ ರಿಯಾಯಿತಿ ಇನ್ನೂ ಒಂದು ವರ್ಷದವರೆಗೆ ಮುಂದುವರಿಕೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)